Categories: ಮಂಗಳೂರು

ಬೆಳ್ತಂಗಡಿ: ಮೃತ್ಯುಂಜಯ ನದಿಯಲ್ಲಿ ನೀರಿನ ಹರಿವು ಆರಂಭ, ಜನ ನಿರಾಳ

ಬೆಳ್ತಂಗಡಿ: ಕಳೆದ ಸುಮಾರು ಒಂದು ತಿಂಗಳಿನಿಂದ ಹರಿವು ಕ್ಷೀಣಗೊಂಡು ಆತಂಕ ಮೂಡಿಸಿದ್ದ ಬೆಳ್ತಂಗಡಿ ತಾಲೂಕಿನ ಮೃತ್ಯುಂಜಯ ನದಿಯಲ್ಲಿ ನೀರಿನ ಹರಿವು ಆರಂಭವಾಗಿದ್ದು ಪರಿಸರದ ಜನರು ನಿರಾಳರಾಗಿದ್ದಾರೆ.

ಕಲ್ಮಂಜ ಗ್ರಾಮದ ಪಜಿರಡ್ಕದಲ್ಲಿ ನೇತ್ರಾವತಿ ನದಿಯಲ್ಲಿ ಸಂಗಮಗೊಳ್ಳುವ ಮೃತ್ಯುಂಜಯ ನದಿ ಈ ಬಾರಿ ಭಾರಿ ಪ್ರಮಾಣದಲ್ಲಿಬತ್ತಿ ಹೋಗಿ,ಹೆಚ್ಚಿನ ಕಡೆಗಳಲ್ಲಿ ತನ್ನ ಹರಿವನ್ನು ನಿಲ್ಲಿಸಿತ್ತು.

ಹಿರಿಯರ ಪ್ರಕಾರ ಕಳೆದ ಅನೇಕ ವರ್ಷಗಳ ಬಳಿಕ ನದಿ ಇಷ್ಟೊಂದು ಬತ್ತಿರುವುದು ಈ ಬಾರಿ ಮಾತ್ರ.ನದಿಯು ಬತ್ತಿದ ಕಾರಣ ಕೃಷಿಕರು ಕಂಗಾಲಾಗುವ ಸ್ಥಿತಿ ಎದುರಾಗಿತ್ತು. ಕಳೆದ ನಾಲ್ಕಾರು ದಿನಗಳಿಂದ ಚಾರ್ಮಾಡಿ ಹಾಗೂ ನದಿ ಹರಿಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ‌ ಸುರಿದ ಮಳೆಯ ಪರಿಣಾಮ ನೀರಿನ ಹರಿವು ಆರಂಭವಾಗಿದೆ. ಚಾರ್ಮಾಡಿಯಿಂದ ಪಜಿರಡ್ಕ ತನಕ ನೀರು ಹರಿಯುತ್ತಿದೆ.ಈ ನದಿಗೆ ಆನಂಗಳ್ಳಿ,ಕಡಂಬಳ್ಳಿ,ಮುಂಡಾಜೆ,ಕಾಪು ಮೊದಲಾದ ಪರಿಸರಗಳಲ್ಲಿರುವ ಕಿಂಡಿ ಅಣೆಕಟ್ಟುಗಳು ತುಂಬಿವೆ. ಸುಮಾರು ಒಂದು ತಿಂಗಳಿನಿಂದ ಕೃಷಿ ತೋಟಗಳಿಗೆ ಕಿಂಡಿ ಅಣೆಕಟ್ಟಿನ ನೀರಿನ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಇವು ತುಂಬಿದ ಪರಿಣಾಮ ನೀರು ಮತ್ತೆ ಕೃಷಿ ತೋಟಗಳನ್ನು ತಲುಪಿದೆ.

ನೇತ್ರಾವತಿಗೆ ಬಲ: ನೇತ್ರಾವತಿ ನದಿಗೆ ಹೆಚ್ಚಿನ ಬಲವನ್ನು ನೀಡುವ ಮೃತ್ಯುಂಜಯ ನದಿಯಲ್ಲಿ ನೀರಿನ ಹೆಚ್ಚಳವಾಗಿರುವುದರಿಂದ ಪಜಿರಡ್ಕದಿಂದ ತಗ್ಗು ಪ್ರದೇಶಗಳಲ್ಲಿ ನೇತ್ರಾವತಿ ನದಿಯ ಹರಿವಿನಲ್ಲೂ ಹೆಚ್ಚಳವಾಗಿದೆ. ಇದು ಜಿಲ್ಲೆಯ ನಾನಾ ಭಾಗಗಳ ಮೂಲಕ ಹರಿಯುವ ನೇತ್ರಾವತಿ ನದಿ ನೀರಿನ ಹೆಚ್ಚಳಕ್ಕೆ ಕಾರಣವಾಗಿದ್ದು ಜಿಲ್ಲೆಯ ಹಲವು ಕಡೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ದಿಡುಪೆ-ಕಲ್ಮಂಜ: ನೇತ್ರಾವತಿ ಯಥಾಸ್ಥಿತಿ: ನೇತ್ರಾವತಿ ನದಿಯ ಆರಂಭದ ಭಾಗವಾದ ದಿಡುಪೆಯಿಂದ ಕಲ್ಮಂಜದ ಕುಡೆಂಚಿತನಕ ಸುಮಾರು 15 ಕಿಮೀ. ವ್ಯಾಪ್ತಿಯಲ್ಲಿ ಬತ್ತಿ ಹೋಗಿರುವ ನದಿಯ ಸ್ಥಿತಿ ಹಾಗೆ ಮುಂದುವರೆದಿದೆ. ಒಂದೂವರೆ ತಿಂಗಳಿನಿಂದ ನದಿಯು ಆಟದ ಮೈದಾನದಂತೆ ಕಂಡುಬರುತ್ತಿದ್ದು ಕೆಲವೇ ಕೆಲವು ಸ್ಥಳಗಳಲ್ಲಿ ನದಿಯ ಹೊಂಡಗಳಲ್ಲಿ ಕೊಂಚಮಟ್ಟದಲ್ಲಿ ನೀರು ಇದ್ದು ಸದ್ಯ ಅದು ಕೂಡ ಬತ್ತಿದೆ. ಇಲ್ಲಿ ನದಿ ಹರಿಯುವ ಪ್ರದೇಶಗಳ ಅನೇಕ ಕಡೆ ಈಗಾಗಲೇ ದಿನಬಳಕೆಯ ನೀರಿಗೆ ನದಿಯಲ್ಲಿ ಹೊಂಡಗಳನ್ನು ತೋಡಲಾಗಿದೆ. ಎಳನೀರು,ದಿಡುಪೆ ಕಡೆ ನಿರಂತರ ಮಳೆಯಾದರೆ ಮಾತ್ರ ಈ ನದಿಯಲ್ಲಿ ಹರಿವು ಆರಂಭವಾಗಲು ಸಾಧ್ಯ.

ಕಳೆದ ಒಂದೂವರೆ ತಿಂಗಳಿನಿಂದ ಕೃಷಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಕೃಷಿಕರಲ್ಲಿ ಸದ್ಯ ಸುರಿದ ನಾಲ್ಕಾರು ಮಳೆ ಸಂತಸದ ವಾತಾವರಣವನ್ನು ಸೃಷ್ಟಿಸಿದೆ.ಇದು ತೋಟಗಳಿಗೆ ಜೀವಕಳೆ ನೀಡಿದೆ. ಪ್ರಸ್ತುತ ಬಿದ್ದ ಮಳೆಯು ಕೃಷಿ ತೋಟಗಳಿಗೆ ತಂಪೆರೆದಿದೆ.ಹಾಗೂ ಹಲವೆಡೆ ಕಿಂಡಿ ಅಣೆಕಟ್ಟುಗಳ ನೀರು ತೋಟಗಳನ್ನು ತಲುಪಲು ಸಾಧ್ಯವಾಗಿದೆ. ಶನಿವಾರ ಬೆಳಿಗ್ಗೆ,ಮಧ್ಯಾಹ್ನ ಹಾಗೂ ಆಗಾಗ ಬೆಳ್ತಂಗಡಿ ತಾಲೂಕಿನ ಹಲವೆಡೆ ಉತ್ತಮ ಮಳೆ ಸುರಿದಿದೆ.ಮಳೆ ಸುರಿದರೂ ಸೆಕೆ ಮಾತ್ರ ಹೆಚ್ಚಿತ್ತು.

“ಕಳೆದ ಒಂದು ತಿಂಗಳಿಂದ ಮೃತ್ಯುಂಜಯ ನದಿಯ ಕಾಪು ಕಿಂಡಿ ಅಣೆಕಟ್ಟಿನ ನೀರು ಕೃಷಿ ತೋಟಗಳನ್ನು ತಲುಪುತ್ತಿರಲಿಲ್ಲ ಆದರೆ ಈಗ ನದಿಯಲ್ಲಿ ನೀರು ಬಂದಿರುವುದರಿಂದ ನೀರು ಮತ್ತೆ ತೋಟಗಳಿಗೆ ಬರಲು ಆರಂಭವಾಗಿದೆ. 15 ದಿನ ಮಳೆ ಸುರಿಯದಿದ್ದರೂ ತೋಟಗಳಿಗೆ    ಸಮಸ್ಯೆಯಾಗದು”
ಶ್ರೀನಿವಾಸ ಕಾಕತ್ಕರ್, ಕೃಷಿಕರು, ಮುಂಡಾಜೆ.

Ashika S

Recent Posts

ವಿವಾದಾತ್ಮಕ ಹೇಳಿಕೆ : ಶಾಸಕ ರಾಜು ಕಾಗೆಗೆ ಚುನಾವಣಾ ಇಲಾಖೆ ನೋಟಿಸ್‌

ವಿವಾದಾತ್ಮಕ ಹೇಳಿಕೆ ಹಿನ್ನಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ(ಏ.30) ಪ್ರಿಯಾಂಕಾ ಜಾರಕಿಹೊಳಿ‌…

7 hours ago

ಕಾರ್ತಿಕ್​ ಜಯರಾಮ್​ ಹುಟ್ಟುಹಬ್ಬ ಪ್ರಯುಕ್ತ ‘ದಿ ವೀರ್​’​ ಪೋಸ್ಟರ್ ಔಟ್‌

ಸ್ಯಾಂಡಲ್​ವುಡ್​ನ ಖ್ಯಾತ ನಟ ಕಾರ್ತಿಕ್​ ಜಯರಾಮ್​ ಅಲಿಯಾಸ್​ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

8 hours ago

ಕೊಳೆತ ಸ್ಥತಿಯಲ್ಲಿ ಮಹಿಳೆ ಮೃತ ದೇಹ ಪತ್ತೆ

ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ…

8 hours ago

ವಿಜಯ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಅಮೀತ್ ಶಾಗೆ ಅದ್ದೂರಿ ಸ್ವಾಗತ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರವಾಗಿ ಪ್ರಚಾರಕ್ಕೆ ಬಂದ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ವಿಜಯ…

9 hours ago

ಫಾಲ್ಕೆ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಶಸ್ತಿ ಪಡೆದ ‘ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ

ಕೆಂಡ’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದ್ದೆ. ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಸಹದೇವ್ ಕೆಲವಡಿ ಅವರಿಗೆ ಸಿನಿಮಾ…

9 hours ago

ಕಾಂಗ್ರೆಸ್ ಶಾಸಕನದ್ದು ಎನ್ನಲಾದ ಮತ್ತೊಂದು ಅಶ್ಲೀಲವಿಡಿಯೋ ವೈರಲ್‌

ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೊರ್ವ ಶಾಸಕನ ವಿಡಿಯೋ ವೈರಲ್‌ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಶಾಸಕರದ್ದು ಎನ್ನಲಾದ…

9 hours ago