Categories: ಮಂಗಳೂರು

ಬೆಳ್ತಂಗಡಿ: ಮದ್ಯ ವ್ಯಸನಕ್ಕೆ ಎಳೆಯುವ ಸ್ನೇಹಿತರನ್ನು ದೂರವಿರಿಸಬೇಕು- ಡಾ. ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: “ಕಷ್ಟಪಟ್ಟು ಬೆಟ್ಟದ ಮೇಲೆ ಹತ್ತಿ ಜಾರಿದರೆ ಮರಳಿ ಬೆಟ್ಟ ಏರಲು ತುಂಬಾ ಕಷ್ಟಪಡಬೇಕಾಗುತ್ತದೆ. ಮದ್ಯಪಾನಾದಿ ದುಶ್ಚಟಗಳು ಒಮ್ಮೆ ಚಟವಾಗಿ ಅಂಟಿಕೊಂಡರೆ ಜೀವನ ಪರ್ಯಂತ ನಮ್ಮನ್ನು ಆವರಿಸುತ್ತವೆ. ಆದುದರಿಂದ ಅದನ್ನು ಒಮ್ಮೆ ಬಿಟ್ಟವರು ಮತ್ತೊಮ್ಮೆ ಕುಡಿಯುವ ಪ್ರಯತ್ನ ಮಾಡಬಾರದು. ವ್ಯಸನಕ್ಕೆ ಎಳೆಯುವ ಸ್ನೇಹಿತರನ್ನು ದೂರವಿರಿಸಬೇಕು. ನಾವು ನಮ್ಮ ಅಲಂಕಾರಕ್ಕೆ ಕನ್ನಡಿಯನ್ನು ನೋಡುವಂತೆ ನಮ್ಮ ದೋಷವನ್ನು ಸರಿಪಡಿಸಿಕೊಳ್ಳಲು ನಾವೇ ದೃಢ ಮನಸ್ಸನ್ನು ಹೊಂದಬೇಕಾದುದು ಬಹಳ ಮುಖ್ಯ. ವ್ಯಸನಕ್ಕೊಳಗಾಗಿ ಈ ಹಿಂದೆ ಮಾಡಿದ ಪಾಪದಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಹೆಮ್ಮೆಯ ವಿಷಯ. ನಾವು ಕಷ್ಟಪಟ್ಟು ಮಾಡಿದ ದುಡಿಮೆ ವ್ಯಸನದಿಂದಾಗಿ ನಮ್ಮ ಕೈಸೇರದೆ ಮತ್ತೊಬ್ಬರ ಪಾಲಾಗುವುದರಿಂದ ವ್ಯಸನಿಯ ದುಡಿಮೆ ಅಕ್ಷಯ ಪಾತ್ರೆಯಲ್ಲಿರುವ ರಂಧ್ರದಂತೆ. ಆದುದರಿಂದ ಆತ್ಮವಿಶ್ವಾಸದ ಮೂಲಕ ಮರಳಿ ಕುಡಿತಕ್ಕೆ ಜಾರದಂತೆ ಎಚ್ಚರಿಕೆ ವಹಿಸಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಅವನ ಆಯುಷ್ಯವನ್ನು ಸದ್ವಿನಿಯೋಗವಾಗಿ ಕಳೆಯಬೇಕು” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 191ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಶಿಬಿರದಲ್ಲಿ ರಾಜ್ಯ ವಿವಿಧ ಕಡೆಗಳಿಂದ 75 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್ ರವರು ಕ್ರಿಸ್ಮಸ್ ಹಬ್ಬದ ವಿಶೇಷತೆಯನ್ನು ತಿಳಿಸುವುದರೊಂದಿಗೆ ವ್ಯಸನದಿಂದ ಹೊರಬರಲು ಪರಸ್ಪರ ಗೌರವ ಮನೋಭಾವನೆ, ದೇವರ ಮೇಲಿನ ಭಕ್ತಿ, ದುಡಿಮೆಯಲ್ಲಿ ಪ್ರಾಮಾಣಿಕತೆ, ಭಜನೆ, ಧ್ಯಾನ, ಸಂಯಮ, ಕುಟುಂಬದ ಪ್ರೀತಿ, ಕ್ಷಮಾಗುಣ, ಕುಟುಂಬದಲ್ಲಿ ಉತ್ತಮ ಸಂಬಂಧ, ಪರಸ್ಪರ ಆತ್ಮೀಯತೆ, ಸಕಾರಾತ್ಮಕ ಮನೋಭಾವನೆ ಬಹಳ ಮುಖ್ಯ. ಮದ್ಯವರ್ಜನೆಯಾದಾಗ ಈ ಅಂಶಗಳನ್ನು ಮೈಗೂಡಿಸಿಕೊಂಡು ಸುಖೀ ಜೀವನ ನಡೆಸಲು ಸಾಧ್ಯ’ ಎಂದರು.

ಶಿಬಿರದಲ್ಲಿ ಮನೋವೈದ್ಯಕೀಯ ಚಿಕಿತ್ಸೆ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಗುಂಪು ಮತ್ತು ವೈಯಕ್ತಿಕ ಸಲಹೆ, ಕೌಟುಂಬಿಕ ಸಲಹೆ, ಆತ್ಮವಲೋಕನ, ಭಜನೆ ಹಾಗೂ ವಿವಿಧ ತರಗತಿಗಳ ಮೂಲಕ ಪರಿವರ್ತನೆಗೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ವಿಷಯಾಧಾರಿತ ಚರ್ಚೆಗಳನ್ನು ನಡೆಸಿರುತ್ತಾರೆ. ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾೈಸ್ ರವರು ಶಿಬಿರದ ನೇತೃತ್ವ ವಹಿಸಿದ್ದು, ಶಿಬಿರದ ವ್ಯವಸ್ಥೆಯಲ್ಲಿ ಮೋಹನ್, ಆಡಳಿತ ಯೋಜನಾಧಿಕಾರಿಗಳು, ಶಿಬಿರಾಧಿಕಾರಿಯಾಗಿ ವಿದ್ಯಾಧರ್, ಆರೋಗ್ಯ ಸಹಾಯಕಿಯಾಗಿ ನೇತ್ರಾವತಿ ಸಹಕರಿಸಿದರು. ಇದೇ ರೀತಿಯ ಮುಂದಿನ ವಿಶೇಷ ಶಿಬಿರವು ಜ.2 ರಿಂದ ಪ್ರಾರಂಭವಾಗಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

Gayathri SG

Recent Posts

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

22 mins ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

2 hours ago

ವಾಸವಿ ಯುವಜನ ಸಂಘದ ವತಿಯಿಂದ ಪ್ರಸಾದ ವಿತರಣೆ

ವಾಸವಿ ಜಯಂತಿ ಪ್ರಯುಕ್ತ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತೆಂದು ವಾಸವಿ…

2 hours ago

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

2 hours ago

ಮೊಬೈಲ್ ವಿಚಾರಕ್ಕೆ ಹಲ್ಲೆ: ಆರೋಪಿಗಳು ವಶಕ್ಕೆ

ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ.

2 hours ago