ಬೆಳ್ತಂಗಡಿ: ರಾಷ್ಟ್ರದ ಯುವ ಜನತೆಗೆ ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಅವಶ್ಯಕತೆ ಮತ್ತು ಅಂಗಾಂಗ ದಾನದ ಮಹತ್ವಗಳ ಬಗ್ಗೆ ಅರಿವು ಮೂಡಿಸುವ ಸಂದೇಶದೊಂದಿಗೆ ಮಂಗಳೂರಿನಿಂದ ಕಾಶ್ಮೀರದವರೆಗೆ ನಡೆಯಲಿರುವ ಸೈಕ್ಲಿಂಗ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಬೆಳ್ತಂಗಡಿಯ ಶ್ರೀನಿಧಿ ಶೆಟ್ಟಿ ಹಾಗೂ ಜಗದೀಶ ಇವರನ್ನು ಬೆಳ್ತಂಗಡಿಯ ಕುತ್ಯಾರು ದೇವಸ್ಥಾನದಿಂದ ಶನಿವಾರ ಕಳುಹಿಸಿಕೊಡಲಾಯಿತು.
ಇವರ ಈ ಸೈಕ್ಲಿಂಗ್ ಯಾತ್ರೆಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಘಟಕದ ನಿರ್ದೇಶಕ ಕಾಂಚೋಡು ಗೋಪಾಲಕೃಷ್ಣ ಭಟ್ ಚಾಲನೆ ನೀಡಿ ಭಾರತದ ಯುವ ಜನತೆಗೆ ಆರೋಗ್ಯ ಭಾಗ್ಯ ಮುಖ್ಯವಾಗಿದ್ದು ದೇಶ ಸೇವೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕೆಂಬ ಸಂದೇಶ ಹೊತ್ತಿರುವ ಈ ಸೈಕ್ಲಿಂಗ್ ಯಾತ್ರೆ ಮಾದರಿಯಾಗಲಿ ಎಂದು ಹೇಳಿದರು.
ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಶುಭ ಹಾರೈಸಿದರು. ರೋಟರಿ ಕ್ಲಬ್ ಬೆಳ್ತಂಗಡಿ ಪರವಾಗಿ ಅಧ್ಯಕ್ಷೆ ಮನೋರಮ ಭಟ್ ಮತ್ತು ಸದಸ್ಯರು ಧನ ಸಹಕಾರ ನೀಡಿದರು.
ಒಟ್ಟು 3,500 ಕಿ.ಮೀ. ನಡೆಯಲಿರುವ ಈ ಸೈಕ್ಲಿಂಗ್ ಯಾತ್ರೆ 10 ರಾಜ್ಯಗಳ ಮೂಲಕ ಕ್ರಮಿಸಿ ಅ.25 ರಂದು ಕಾಶ್ಮೀರವನ್ನು ತಲುಪಲಿದೆ.ದಾರಿಯುದ್ದಕ್ಕು ಅಲ್ಲಲ್ಲಿ ಇರುವ ಸೈನ್ಯದ ಶಿಬಿರಗಳಲ್ಲಿ ಸೈಕಲ್ ಯಾತ್ರಿಗಳಿಗೆ ಬೇಕಾದ ಅಗತ್ಯ ನೆರವು ನೀಡಲಾಗುತ್ತದೆ. ಜಲಂಧರ್ ನಲ್ಲಿರುವ ಉಜಿರೆಯ ಲೆ.ಕ.ನರಸಿಂಹ ಪ್ರಭು ಮೂರ್ಜೆ ಈ ಯಾತ್ರಿಗಳನ್ನು ಗೌರವಿಸಲಿದ್ದಾರೆ.
ಅ.30ರಂದು ಕಾಶ್ಮೀರದ ಲಾಲ್ ಚೌಕ್ ಮತ್ತು ಕಾರ್ಗಿಲ್ ಪ್ರದೇಶದಲ್ಲಿ ಈ ಯಾತ್ರೆ ಸಂಪನ್ನಗೊಳ್ಳಲಿದೆ.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…