Categories: ಮಂಗಳೂರು

ಬಂಟ್ವಾಳ:  ಬಿ.ಸಿ.ರೋಡ್‌ನ‌ ಫ್ಲೈ ಓವರ್‌ ಪಿಲ್ಲರ್‌ಗಳಲ್ಲಿ ಮೂಡುತ್ತಿದೆ ಬಣ್ಣ ಬಣ್ಣದ ಚಿತ್ತಾರ

ಬಂಟ್ವಾಳ:  ಕೆಲವು ವರ್ಷಗಳ ಹಿಂದೆ ನಿರ್ಮಾಣಗೊಂಡು ಅಸ್ಥವ್ಯಸ್ಥ ಸ್ಥಿತಿಯಲ್ಲಿದ್ದ ಬಿ.ಸಿ.ರೋಡ್‌ನ‌ ಫ್ಲೈ ಓವರ್‌ ತಳಭಾಗಕ್ಕೆ ದುರಸ್ತಿ ಭಾಗ್ಯ ದೊರಕಿದ್ದು, ಪ್ರಸ್ತುತ ಫ್ಲೈ ಓವರ್‌ ಪಿಲ್ಲರ್‌ಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವ ಕಾರ್ಯಭರದಿಂದ ಸಾಗಿದೆ.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಬಿ.ಸಿ.ರೋಡ್‌ ಸುಂದರೀಕರಣ ಯೋಜನೆಯ ಮೂಲಕ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಚರಂಡಿ ನಿರ್ಮಾಣ, ಇಂಟರ್‌ಲಾಕ್‌ ಅಳವಡಿಕೆಯ ಕಾರ್ಯಪೂರ್ಣಗೊಂಡು, ಫ್ಲೈ ಓವರ್‌ ತಳಭಾಗವನ್ನು ತೊಳೆದು ಪೈಟಿಂಗ್‌ ಕಾರ್ಯವೂ ಪೂರ್ಣಗೊಂಡಿದೆ.

ಯೋಜನೆಗೆ ಶಿಲಾನ್ಯಾಸ ನಡೆದು ಹಲವು ಕಾರಣಕ್ಕೆ ವಿಳಂಬವಾಗಿದ್ದ ಕಾಮಗಾರಿ ಬಳಿಕ ಪುನರಾರಂಭಗೊಂಡಿತ್ತು. ಬಸ್‌ನಿಲ್ದಾಣದ ಬಳಿ ಫ್ಲೈ ಓವರ್‌ ತಳಭಾಗದಲ್ಲಿ ಶೌಚಾಲಯ ಕೂಡ ನಿರ್ಮಾಣಗೊಂಡಿದೆ. ಇದೀಗ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಪ್ರತೀ ಪಿಲ್ಲರ್‌ಗಳ ಎರಡೂ ಬದಿಗಳಲ್ಲೂ ಹಲವು ಬಗೆಯ ಚಿತ್ರಗಳು ರಚನೆಯಾಗಲಿವೆ.

ಈ ಮೂಲಕ ಸಂಪೂರ್ಣವಾಗಿ ಪಾಚಿ ತುಂಬಿ ಅಸಹ್ಯ ಸ್ಥಿತಿಯಲ್ಲಿದ್ದ ಪಿಲ್ಲರ್‌ಗಳು ಚಿತ್ರಗಳೊಂದಿಗೆ ಕಂಗೊಳಿಸಲಿದ್ದು, ಆದರೆ ನಿರ್ವಹಣೆ ಇಲ್ಲದೇ ಹೋದರೆ ಮತ್ತೆ ಹಿಂದಿನ ಸ್ಥಿತಿಗೆ ಬರುವ ಸಾಧ್ಯತೆಯೂ ಇದೆ. ಮಳೆಗಾಲದಲ್ಲಿ ಪಿಲ್ಲರ್‌ಗಳ ಬಳಿ ಮೇಲಿನ ರಸ್ತೆಯಿಂದ ನೀರು ಬೀಳುವ ಸಮಸ್ಯೆಯಿದ್ದು, ಅದಕ್ಕೆ ಪರಿಹಾರ ಕಲ್ಪಿಸದೇ ಇದ್ದಲ್ಲಿ ಚಿತ್ರಗಳ ಮೇಲೆಯೂ ನೀರು ಬಿದ್ದು ಮತ್ತೆ ಪಾಚಿ ಬರುವ ಸಾಧ್ಯತೆ ಇದೆ, ಈ ಕುರಿತು ಕಾಮಗಾರಿ ಗುತ್ತಿಗೆದಾರರು ಗಮನಹರಿಸುವುದು ಒಳಿತು.

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

6 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

7 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

7 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

7 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

8 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

9 hours ago