ಬಂಟ್ವಾಳ : ಹಿಜಾಬ್ ಪ್ರಕರಣ ದೇಶ ವಿಭಜನೆಯ ಬೀಜಾಂಕುರ ಎಂದು ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಭಿಪ್ರಾಯಪಟ್ಟಿದ್ದಾರೆ. ಸಜಿಪನಡುವಿನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ದೇಶವಿಭಜನೆ ನಡೆದ ಘಟನೆ ಒಂದು ದಿನದ ವಿಚಾರವಲ್ಲ, ಅದಕ್ಕೂ ಮೊದಲು ವಂದೇ ಮಾತರಂ ಹಾಡನ್ನು ಕಡಿತಗೊಳಿಸುವ ವಿಚಾರದಿಂದಲೇ ಆರಂಭವಾಯಿತು.
ಹಾಗೆಯೇ ಹಿಜಾಬ್ ಪ್ರಕರಣವೂ ಮುಂದುವರಿದು, ತರಗತಿಯಲ್ಲಿ ನಮಾಜ್ ಮಾಡಲು ಜಾಗ ಕೊಡಿ, ಶುಕ್ರವಾರ ರಜೆ ಕೊಡಿ ಎಂದು ಕೇಳಬಹುದು ಎಂದ ಭಟ್, ಹಿಂದು ಸಮಾಜ ನೇರವಾಗಿ ಏನೂ ಮಾಡುವುದಿಲ್ಲ, ಆದರೆ ಪ್ರತಿಕ್ರಿಯೆ ತೋರುತ್ತಾರೆ, ಹಿಂದು ಸಮಾಜ ಹೆದರಿ ಓಡುವುದಿಲ್ಲ, ಹಿಜಾಬ್ ಯಾಕೆ ಹಾಕಿದ್ದೀರಿ ಎಂದು ಕೇಳಿದ್ದಕ್ಕೆ ಕೇಸರಿ ಶಾಲು ಹಾಕಿ ಬಂದರು. ಇದು ತಪ್ಪಲ್ಲ, ಕೇಸರಿ ಶಾಲು ಹಾಕಿದ ತರುಣರನ್ನು ನಾನು ಅಭಿನಂದಿಸುತ್ತೇನೆ, ಅವರಿಗೆ ಜೈಕಾರ ಹಾಕುವುದಾಗಿ ಭಟ್ ಹೇಳಿದರು.
ಹಿಜಾಬ್ ಕೇಸರಿ ಗೊಂದಲದಿಂದ ಶಾಲೆ ಹಾಳಾಗುತ್ತದೆ ಎನ್ನುತ್ತಾರೆ, ದೇಶದ ಸ್ವಾತಂತ್ರ್ಯ ಹೋರಾಟ ನಡೆದಾಗ, ತುರ್ತು ಪರಿಸ್ಥಿತಿ ಯ ಸಂದರ್ಭದಲ್ಲೂ ಸಾವಿರ ಮಂದಿ ವಿದ್ಯಾರ್ಥಿಗಳೇ ಬೀದಿಗೆ ಬಂದಿದ್ದರು. ಶಾಲೆ ಹೋದರೆ ಹೋಗಲಿ, ಧರ್ಮ, ದೇಶ ಮುಖ್ಯವಾಗಿದ್ದು , ದೇಶ ಇದ್ದರೆ ಶಾಲೆ, ಧರ್ಮ ಇದ್ದರೆ ಶಾಲೆ, ನಮ್ಮ ಸಂಸ್ಕೃತಿ ಉಳಿದರಷ್ಟೇ ಶಾಲೆ ಎಂದು ಭಟ್ ಹೇಳಿದರು.
ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…
ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ.
ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…
ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…
ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್ಗಳು…