Categories: ಮಂಗಳೂರು

ಸ್ಟ್ರಿಂಗ್  ಕಲೆಯ ಸಾಧಕಿ ರಂಜಿತಾಗೆ ಅನಂತಮಿತ್ರ ಕಲ್ಬಾವಿ ಪ್ರಶಸ್ತಿ ಪ್ರದಾನ

ಮಂಗಳೂರು: ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಆಶ್ರಯದಲ್ಲಿ ಪ್ರಥಮ ವಾರ್ಷಿಕ ಅನಂತಮಿತ್ರ ಕಲ್ಬಾವಿ ಪ್ರಶಸ್ತಿ 2022ಯನ್ನು ಯುವ ಸಾಧಕಿ ರಂಜಿತ ದೇವಾಡಿಗ ಅವರಿಗೆ ಸ್ಟ್ರಿಂಗ್ ಕಲೆಯಲ್ಲಿ ಸಾಧಿಸಿದ ಸಾಧನೆಯನನ್ನು ಪರಿಗಣಿಸಿ ನಗರ ಹೋಟೆಲ್ ಉತ್ಸವ್ ಸಭಾಂಗಣದಲ್ಲಿ ಶನಿವಾರ ಪ್ರದಾನ ಮಾಡಲಾಯಿತು.

ರೋಟರಿ ಸಂಸ್ಥೆಯ ಸಲಹೆಗಾರ ಹಾಗೂ ಪ್ರಶಸ್ತಿಯ ಮುಖ್ಯ ಪ್ರಾಯೋಜಕ ರಾಜೇಂದ್ರ ಕಲ್ಬಾವಿ ಭಾಗವಹಿಸಿ, ತಮ್ಮ ಪೋಷಕರಾದ ದಿ. ಕಲ್ಬಾವಿ ಅನಂತ ಪದ್ಮನಾಭ ರಾವ್ ಹಾಗೂ ದಿ. ಸುಮಿತ್ರ ರಾವ್ ಸ್ಮರಣಾರ್ಥ ಪ್ರಾಯೋಜಿಸಲಾಗಿದೆ. ಹೆಬ್ರಿ ಮೂಲದ ರಾಘವೇಂದ್ರ ದೇವಾಡಿಗ ಮತ್ತು ಪ್ರಮೀಳ ದೇವಾಡಿಗರ ಪುತ್ರಿ ರಂಜಿತಾ ಕುಮಾರಿಗೆ ನೀಡಿದ್ದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಮತ್ತು ನಗದು ಬಹುಮಾನ ಹತ್ತು ಸಾವಿರ ರೂ. ಓಳಗೊಂಡಿದೆ ಎಂದರು.

ಸಂಸ್ಥೆಯ ಯುವ ಸೇವಾ ಯೋಜನೆಯ ನಿರ್ದೇಶಕ ಪ್ರಶಾಂತ್ ರೈ, ವಾಣಿ ರಾಜೆಂದ್ರ ಕಲ್ಬಾವಿ, ರಾಜಶ್ರೀ, ಶೈಲಶ್ರೀ, ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಅಧ್ಯಕ್ಷ ಕ್ಯಾನುಟ್ ಪಿಂಟೊ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ. ರಂಜನ್ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು.

ಈ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಸನ್ನಿತ್ ಶೇಟ್ ಅವರನ್ನು ಸಂಸ್ಥೆಗೆ ಸೇರ್ಪಡಿಸಲಾಯಿತು. ಕಾರ್ಯದರ್ಶಿ ಬಸವಕುಮಾರ್ ವಂದಿಸಿದರು.

Gayathri SG

Recent Posts

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

1 min ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

14 mins ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

44 mins ago

ಹಾಸನ ವಿಡಿಯೋ ಪ್ರಕರಣ: ಡಿ.ಕೆ. ಶಿವಕುಮಾರ್‌ ಪಿತೂರಿ ಇದೆ ಎಂದ ಎಚ್‌.ಡಿ. ಕುಮಾರಸ್ವಾಮಿ

ಹಾಸನ ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪಿತೂರಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…

59 mins ago

ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

1 hour ago

ನಾಲ್ಕು ವರ್ಷಗಳ ನಂತರ ಧಾರವಾಡಕ್ಕೆ ಕಾಲಿಟ್ಟ ಶಾಸಕ ವಿನಯ್ ಕುಲಕರ್ಣಿ

ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್‌ ಅನುಮತಿ ಮೇರೆಗೆ ಮಂಗಳವಾರ…

2 hours ago