Categories: ಮಂಗಳೂರು

ವಿವಿಧ ವಿಷಯಗಳ ಕುರಿತು ಸಭೆ ಸ್ವಚ್ಛತೆ- ಸೇವೆಗಾಗಿ ಪಂಚ ನಿರ್ಣಯ

ಮಂಗಳೂರು :  ನಗರದ ಅಭಿವೃದ್ಧಿಯ, ತೆರಿಗೆ ಸಂಗ್ರಹಣೆ, ಕಟ್ಟಡ ಪರವಾನಿಗೆ, ಏಕಗವಾಕ್ಷಿ ಯೋಜನೆ, ಕಸ ನಿರ್ವಹಣೆ, ಎಸ್.ಟಿ.ಪಿ ಅಳವಡಿಕೆ ಮತ್ತು ನಿರ್ವಹಣೆ, ಒಳಚರಂಡಿ ಜಾಲಕ್ಕೆ ಮಳೆನೀರು ಬಿಡುವ ಸಮಸ್ಯೆ, ಒಳಚರಂಡಿ ಜೋಡಣೆ ಸೇರಿದಂತೆ ಮಹತ್ವದ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸುಧಾರಣೆ ತರುವ ನಿಟ್ಟಿನಲ್ಲಿ ಪಂಚ ನಿರ್ಣಯಗೊಳ್ಳಲಾಗಿದೆ.
ನಗರದಲ್ಲಿ ಆಯುಕ್ತ  ಅಧ್ಯಕ್ಷತೆಯಲ್ಲಿ ಮಂಗಳವಾರ   ಮಹಾನಗರಪಾಲಿಕೆಯ ಸಮಿತಿ ಸಭಾಂಗಣದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ನಡೆದ‌ ಸಭೆ ಪ್ರಮುಖ ವಿಷಯಗಳ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹಲವು ಮಹತ್ವದ ಅಂಶಗಳು ಗಮನ ಸೆಳೆದಿವೆ.
ಸಭೆ ನಡೆಸಿದರು.
1.ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‍ಮೆಂಟ್, ವಾಣಿಜ್ಯ ಕಟ್ಟಡಗಳ ಮಾಹಿತಿಯನ್ನೊಳಗೊಂಡ ಆಸ್ತಿಗಳ ದಾಖಲಾತಿ ಅಭಿವೃದ್ದಿಪಡಿಸುವ ಸಂಬಂಧ ಪಾಲಿಕೆಯಿಂದ ನಿಗಧಿಪಡಿಸಿದ ನಮೂನೆಯಲ್ಲಿ ಭರ್ತಿ ಮಾಡಿ ನಿಗಧಿತ ಸಮಯದೊಳಗೆ ಸಂಪೂರ್ಣ ಮಾಹಿತಿಯನ್ನು, ಕಟ್ಟಡ ಅಭಿವೃದ್ಧಿದಾರರು/ಕಟ್ಟಡದ ಮಾಲೀಕರು ನೀಡುವ ಬಗ್ಗೆ ಕ್ರಮವಹಿಸಬೇಕು.
2.ಘನತ್ಯಾಜ್ಯ ಸಮರ್ಪಕ ನಿರ್ವಹಣೆಯ ಕುರಿತು ಇರುವ ವಿವಿಧ ಮಾದರಿಯ ತಂತ್ರಜ್ಞಾನದ ಬಗ್ಗೆ ಕಾರ್ಯಾಗಾರ ಪ್ರದರ್ಶನ ನಡೆಸಿಕೊಂಡು, ಆಸಕ್ತದಾರರಿಗೆ ಸೂಕ್ತ ಮಾಹಿತಿ ನೀಡಲು ಆರೋಗ್ಯ ವಿಭಾಗದಿಂದ ಕ್ರಮ ವಹಿಸುವುದು.
3.ಕಟ್ಟಡ ಪರವಾನಿಗೆಗೆ ಸಂಬಂಧಪಟ್ಟಂತೆ ಏಕಗವಾಕ್ಷಿ ಯೋಜನೆಯ ನಿರ್ಮಾಣ (II) ರ ತಂತ್ರಾಂಶದ ಮೂಲಕ ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಪ್ರಸ್ತುತ ಇರುವ ಅಡಚಣೆಗಳ ಕುರಿತು ಚರ್ಚಿಸಲಾಯಿತು. ಅನೇಕರು ಸಮಸ್ಯೆಗಳನ್ನು ತಿಳಿಸಿದ್ದರಿಂದ
ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯ ಸುಸೂತ್ರ ನಿರ್ವಹಣೆಯ ಬಗ್ಗೆ ತಜ್ಞ-ಆರ್ಕಿಟೆಕ್ಟ್-ಇಂಜಿನಿಯರರು
ಸಹಭಾಗಿತ್ವದೊಂದಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಯಿತು.
4.ಪಾಲಿಕೆ ವ್ಯಾಪ್ತಿಯ ವಸತಿ/ಬಹುಮಹಡಿ/ವಾಣಿಜ್ಯ/ಕೈಗಾರಿಕೆ/ಇತರೆ ಕಟ್ಟಡಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಪಾಲಿಕೆಯ ಒಳಚರಂಡಿ ಜಾಲಕ್ಕೆ ಸಂಪರ್ಕಿಸುತ್ತಿರುವುದರಿಂದ ಪಾಲಿಕೆಯ ಒಳಚರಂಡಿ ಜಾಲದ ನಿರ್ವಹಣೆ ಮಾಡಲು ತೊಂದರೆಯಾಗುತ್ತಿರುವುದರಿಂದ ಕಟ್ಟಡಗಳಲ್ಲಿಯೇ ಸೂಕ್ತವಾಗಿ ನಿರ್ವಹಣೆ ಮಾಡಲು ತೀರ್ಮಾನಿಸಲಾಯಿತು.
5: ನಗರದಲ್ಲಿ ಪಾಲಿಕೆ ವ್ಯಾಪ್ತಿಗೆ ಬರುವ ಉದ್ಯಾನವನ, ವೃತ್ತ, ಕೆರೆಗಳ ಅಭಿವೃದ್ಧಿ ಪಡಿಸಿ ಸುಂದರಿಕರಣಕ್ಕೆ ಒತ್ತು ನೀಡುವುದು. ನಿರ್ವಹಣೆ ಸಮರ್ಪಕವಾಗಿ ಮಾಡುವ ಬಗ್ಗೆ  ವಿನ್ಯಾಸ, ಅಂದಾಜು ವೆಚ್ಚು, ವಾರ್ಷಿಕ‌‌ ನಿರ್ವಹಣೆ ಬಗ್ಗೆ‌ ಖರ್ಚು , ವೆಚ್ಚ ವಿವರ ನೀಡಿದಲ್ಲಿ ಈ ಬಗ್ಗೆ ಗಮನ ಹರಿಸಲಾಗುವುದು ಬಿಲ್ಡರ್ಸ ಅಸೋಸಿಯೇಷನ್ ತಿಳಿಸಿದರು. ಒಟ್ಟಾರೆ ‌ನಗರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪಾಲಿಕೆಯು ಪಂಚ ನಿರ್ಣಯ ತೆಗೆದುಕೊಂಡಿದೆ.
Raksha Deshpande

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

6 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

6 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

7 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

7 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

7 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

8 hours ago