Categories: ಮಂಗಳೂರು

ರಬ್ಬರ್ ಶೀಟ್ ಗೆ ಬಳಸುವ ಆಸಿಡ್ ನ್ನು ಮದ್ಯ ಎಂದು ಭಾವಿಸಿ ಕುಡಿದ ವ್ಯಕ್ತಿಯೋರ್ವ ಸಾವು

ಬೆಳ್ತಂಗಡಿ: ರಬ್ಬರ್ ಶೀಟ್ ಗೆ ಬಳಸುವ ಆಸಿಡ್ ನ್ನು ಮದ್ಯ ಎಂದು ಭಾವಿಸಿ ಕುಡಿದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯದ ಹುಂಬಾಜೆಯ ಹೇರಲ್ ಎಂಬಲ್ಲಿ ನಡೆದಿದೆ.

ಇಲ್ಲಿನ ಬಾಬು(62) ಎಂಬವರು ರಬ್ಬರ್ ಶೆಡ್ ಗೆ ಮದ್ಯ ಹಾಗೂ ಆಸಿಡ್ ಬಾಟಲಿ ತೆಗೆದುಕೊಂಡು ಹೋಗಿದ್ದು ಒಂದೆಡೆ ಇಟ್ಟಿದ್ದರು. ಬಳಿಕ ಮದ್ಯದ ಬಾಟಲಿ ಎಂದು ಭಾವಿಸಿ ಆಸಿಡ್ ಬಾಟಲಿ ತೆಗೆದುಕೊಂಡು ಕುಡಿದಿದ್ದರು.

ಇದರಿಂದ ಅಸ್ವಸ್ಥಗೊಂಡ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ತಕ್ಷಣ ಕರೆದುಕೊಂಡು ಹೋಗಿದ್ದು,ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಏ.18ರಂದು ಮೃತಪಟ್ಟರು. ಪ್ರಕರಣ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Sneha Gowda

Recent Posts

ಕೋವಿಡ್ ಹೊಸ ರೂಪಾಂತರಿ ಪತ್ತೆ : 91 ಪ್ರಕರಣ ದಾಖಲು

ಈಗಾಗಲೇ ಒಂದು ಬಾರಿ ಜನ ಜೀವನವನ್ನು ಅಲ್ಲೋಲಾ ಕಲ್ಲೊಲಾ ಮಾಡಿದ್ದ ಕೊರೊನಾ ಮಾರಿ ಇದೀಗ ಮತ್ತೆ ಒಂದು ಹೊಸ ರೂಪದಲ್ಲಿ…

3 mins ago

ಇಂದು ಮಧ್ಯಾಹ್ನ ರೇವಣ್ಣ ರಿಲೀಸ್ : ಜೈಲಿನ ಬಳಿ ಬೆಂಬಲಿಗರ ಸಂಭ್ರಮ

ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಇಂದು…

18 mins ago

ಕೇರಳದಲ್ಲಿ ಎರಡು ಕಡೆ ಐಸ್‌ಕ್ರೀಂ ಬಾಂಬ್‌ ಸ್ಫೋಟ

ಇಲ್ಲಿನ ಪರಿಯಾರಂನ ಅಂಚರಕಂಡಿಯಲ್ಲಿ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಸ್ತೆಗೆ ಎಸೆಯಲಾದ 2 ಐಸ್‌ ಕ್ರೀಂ ಬಾಂಬ್‌ಗಳು…

32 mins ago

ಮುಂಬೈನಲ್ಲಿ ದಿಢೀರ್‌ ದೂಳಿನ ಬಿರುಗಾಳಿ: 8 ಸಾವು, 65 ಜನರಿಗೆ ಗಾಯ

ಮುಂಬೈನಲ್ಲಿ ಸಂಜೆ ದಿಢೀರನೆ ಬಿರುಗಾಳಿ ಕಾಣಿಸಿಕೊಂಡಿದ್ದು ಪರಿಣಾಮ 8 ಮಂದಿ ಸಾವನಪ್ಪಿದ್ದಾರೆ. ಜೊತೆಗೆ 65 ಜನರು ಗಾಯಗೊಂಡಿದ್ದಾರೆ. ಗಾಳಿಯ ಬೆನ್ನಲ್ಲೇ…

55 mins ago

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

ಬಿಹಾರದ ಮಾಜಿ ಡಿಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ (72) ಅವರು ನಿಧನ ಹೊಂದಿದ್ದಾರೆ. ದೆಹಲಿಯ ಅಖಿಲ…

1 hour ago

ನುಡಿದಂತೆ ನಡೆದ ಮೋದಿ : ಬಾಗಲಕೋಟೆ ಬಾಲಕಿಗೆ ಬಂತು ನಮೋ ಪತ್ರ

ಪ್ರಧಾನಿ ನರೇಂದ್ರ ಮೋದಿ ಮತ್ತು ತಾಯಿಯ ಸ್ಕೆಚ್ ನೀಡಿದ್ದ ಬಾಗಲಕೋಟೆಯ ಯುವತಿ ನಾಗರತ್ನ ಮೇಟಿಗೆ ಕೊಟ್ಟ ಮಾತಿನಂತೆ ಮೋದಿ ಇದೀಗ…

1 hour ago