Categories: ಮಂಗಳೂರು

ಮಂಗಳೂರಿನ ರಸ್ತೆಗೆ ‘ಜಾರ್ಜ್ ಫೆರ್ನಾಂಡಿಸ್’ ಹೆಸರು

ಜಾರ್ಜ್ ಫೆರ್ನಾಂಡಿಸ್ ಅವರು 1930ರ ಜೂನ್ 3 ರಂದು ಮಂಗಳೂರಿನ ಬಿಜೈನಲ್ಲಿ ಜಾನ್ ಜೋಸೆಫ್ ಫೆರ್ನಾಂಡಿಸ್ ಮತ್ತು ಆಲಿಸ್ ಮಾರ್ತಾ ಫೆರ್ನಾಂಡಿಸ್ ಅವರ ಆರು ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದರು. ಸಮಾಜದ ದೀನದಲಿತ ಬಡ ಮತ್ತು ದುರ್ಬಲ ವರ್ಗಗಳಿಗೆ ಸಮರ್ಪಿತ ಮತ್ತು ಬದ್ಧತೆಯ ಸೇವೆ ನೀಡಿದ ಅವರ ಹೆಸರು ಭಾರತದಲ್ಲೆಡೆ ಮನೆಮಾತಾಯಿತು.

ಸಮಾಜವಾದಿ ಸಿದ್ಧಾಂತದಿAದ ಪ್ರಭಾವಿತರಾದ ಅವರು ಮುಂಬೈಗೆ ತೆರಳಿ ಟ್ರೇಡ್ ಯೂನಿಯನ್ ನಾಯಕರಾಗಿ ಹೊರಹೊಮ್ಮಿದರು. ಕಾರ್ಮಿಕರಿಗಾಗಿ ಸಂಘಗಳನ್ನು ಸಂಘಟಿಸುವುದು, ಅವರ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನಾಯಕರಾಗಿ ಮತ್ತು ಮಾರ್ಗದರ್ಶಕರಾಗಿ ಪರಿಹರಿಸಲು ಮಾಡಿದ ಅವರ ಶ್ರಮ ಮತ್ತು ಉದ್ದೇಶವು ಅನುಕರಣೀಯವಾಗಿದೆ.

ಅವರು 1961 ರಿಂದ 1968 ರವರೆಗೆ ಮುಂಬಯಿಯ ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಜಾರ್ಜ್ ಅವರು ಬಡ ಜನಸಾಮಾನ್ಯರಿಗೆ ಹೀರೋ ಆಗಿದ್ದರು, ಅವರ ಹಕ್ಕುಗಳಿಗಾಗಿ ತೀವ್ರವಾಗಿ ಹೋರಾಡಿದರು, ಪ್ರತಿಭಟನೆಗಳು ಮತ್ತು
ಬಂದ್‌ಗಳನ್ನು ಮುನ್ನಡೆಸಿದರು, ಅದಕ್ಕಾಗಿ ಅವರು ಅನೇಕ ಬಾರಿ ಜೈಲು ಶಿಕ್ಷೆ ಅನುಭವಿಸಿದರು. 1974 ರಲ್ಲಿ, ಅವರು 1.4 ಮಿಲಿಯನ್ ರೈಲ್ವೇ ಕಾರ್ಮಿಕರ ಮುಷ್ಕರವನ್ನು ಕರೆದು ಇಡೀ ಭಾರತದಲ್ಲಿ ಯಾವುದೇ ಯೂನಿಯನ್ ನಾಯಕರು ಮಾಡಲಸಾಧ್ಯವಾದ ಕೆಲಸವನ್ನು ಮಾಡಿ ತೋರಿಸಿ ಭಾರತದೆಲ್ಲೆಡೆ ರೈಲ್ವೆ ಸೇವೆಗಳನ್ನು ಸ್ಥಗಿತಗೊಳಿಸಿದರು.

ಎಲ್ಲರ ಸಮಾಜ ಕಲ್ಯಾಣವೇ ಅವರ ಮಾನದಂಡವಾಗಿತ್ತು ಮತ್ತು ಅದಕ್ಕಾಗಿ ಅವರು ಅಚಲವಾದ ವಿಶ್ವಾಸಾರ್ಹತೆಯೊಂದಿಗೆ ಸತತವಾಗಿ ಹೋರಾಡಿದರು. 1967 ರಿಂದ 2004 ರವರೆಗೆ ಅವರು 9 ಲೋಕಸಭಾ ಚುನಾವಣೆಗಳನ್ನು ಗೆದ್ದಿದ್ದಾರೆ, ಇದು ಖ್ಯಾತಿಯ ರಾಷ್ಟ್ರೀಯ ನಾಯಕರಾಗಿ ಅವರ ಅಪಾರ ಜನಪ್ರಿಯತೆಯನ್ನು ಚಿತ್ರಿಸುತ್ತದೆ. ಅವರು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ, ರಾಜವಂಶದ ಸರ್ವಾಧಿಕಾರಿ ಕೃತ್ಯಗಳು ಮತ್ತು ಯಾವುದೇ ರೀತಿಯ ಕೋಮುವಾದವನ್ನು ತಿರಸ್ಕರಿಸಿದರು.

ಅವರು ಭಾರತೀಯ ಸಂಸತ್ತಿನ ಗೋಡೆಗಳ ಮೇಲೆ ಅಳಿಸಲಾಗದ ಕಲೆಗಳನ್ನು ಬಿಟ್ಟ ಸರ್ವಾಧಿಕಾರವನ್ನು ಪ್ರತಿಬಿಂಬಿಸುವ ಕ್ರೂರ
ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದರು. ಜಾರ್ಜ್ ಫರ್ನಾಂಡಿಸ್ ಅವರು ಕೇಂದ್ರ ಸಂಪುಟದಲ್ಲಿ ಸಂವಹನ, ಕೈಗಾರಿಕೆ, ರೈಲ್ವೆ ಮತ್ತು ರಕ್ಷಣಾ ಸಚಿವರಾಗಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು ಮತ್ತು ಪ್ರಾಮಾಣಿಕವಾಗಿ ಜವಾಬ್ದಾರಿಗಳನ್ನು ನಿಭಾಯಿಸಿದರು.

ಪ್ರಧಾನಿ ಮೊರಾರ್ಜಿ ದೇಸಾಯಿ ಕ್ಯಾಬಿನೆಟ್‌ನಲ್ಲಿ ಕೈಗಾರಿಕಾ ಸಚಿವರಾಗಿ, ಅವರು ಕೋಕಾ ಕೋಲಾ ಮತ್ತು ಐಬಿಎಂ ಅನ್ನು ಭಾರತದಿಂದ ಹೊರಹಾಕಿದರು, ಇದು ಅವರ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಲಕ್ಷಣವಾಗಿದೆ.

ಅವರು ಕೊಂಕಣ ರೈಲ್ವೆಯ ವಾಸ್ತುಶಿಲ್ಪಿಯಾಗಿದ್ದಾರೆ, ಇದು ಏಷ್ಯಾದ ಎರಡನೇ ಅತಿದೊಡ್ಡ ರೈಲ್ವೆ ಜಾಲವಾಗಿದೆ. ಯೋಜನೆಯನ್ನು ಯೋಜಿಸುವಲ್ಲಿ, ಅದನ್ನು ಕಾರ್ಯಗತಗೊಳಿಸುವಲ್ಲಿ ಅವರ ಛಲ, ನಿರ್ಣಯಗಳು ಮತ್ತು ದೂರದೃಷ್ಟಿಯ ಉತ್ಸಾಹವು ಶ್ಲಾಘನೀಯವಾಗಿದೆ.

ರಕ್ಷಣಾ ಮಂತ್ರಿಯಾಗಿ ಅವರು ಕಾರ್ಗಿಲ್ ಯುದ್ಧ, ಪೋಖ್ರಾನ್ -2 ​​ಪರಮಾಣು ಪರೀಕ್ಷೆಯನ್ನು ಅವರು ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ಚತುರವಾಗಿ ನಡೆಸಿದ್ದು ಅವರ ಯಶಸ್ಸುಗಳ ಸರಮಾಲೆಗೆ ಮತ್ತೊಂದು ಗರಿಯಾಗಿದೆ. ಅವರು ಆಗಾಗ್ಗೆ ರಕ್ಷಣಾ ಪಡೆಗಳಿಗೆ ಭೇಟಿ ನೀಡಿ ಅವರ ಅಗತ್ಯತೆಗಳು ಮತ್ತು ಕುಂದುಕೊರತೆಗಳನ್ನು ಆಲಿಸುತ್ತಾ ಅವರೊಂದಿಗೆ ಸಮಯ ಕಳೆಯುತ್ತಿದ್ದರು.

ಅವರು ಸಿಯಾಚಿನ್ ಹಿಮನದಿಯಲ್ಲಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಗೆ ದಾಖಲೆಯ 32ನೇ ಭೇಟಿ ನೀಡಿದ್ದರು. ಸೈನಿಕರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ತಾಪಮಾನವು ತುಂಬಾ ಹೆಚ್ಚಿರುವಾಗ ಮತ್ತು ಚಳಿಗಾಲದಲ್ಲಿ ಶೀತಲವಾಗಿರುವಾಗ ಮರುಭೂಮಿ ಪೋಸ್ಟ್ಗಳಿಗೆ ಭೇಟಿ ನೀಡುವಂತೆ ಅವರು ಅಧಿಕಾರಿಗಳನ್ನು ನಿರ್ದೇಶಿಸುತ್ತಿದ್ದರು.

ಜಾರ್ಜ್ ಅವರು ರಕ್ಷಣಾ ಸಚಿವರಾಗಿದ್ದಾಗ ಮೊದಲ ಬಾರಿಗೆ ಸೈನಿಕರಿಗೆ ಹಿಮ ಸ್ಕೂಟರ್‌ಗಳನ್ನು ಒದಗಿಸಿದರು.
ಜಾರ್ಜ್ ಅವರು ಪ್ರಬಲ ವಾಗ್ಮಿಯಾಗಿದ್ದರು, ಅವರು ವಿವಿಧ ವಿಷಯಗಳ ಬಗ್ಗೆ ತಮ್ಮ ಸಮೃದ್ಧ ಭಾಷಣಗಳಿಂದ ಸಂಸತ್ತನ್ನು ಪಿನ್ ಡ್ರಾಪ್ ಸೈಲೆನ್ಸ್ ಆಗಿ ಪರಿವರ್ತಿಸುತ್ತಿದ್ದರು.

ರಾಷ್ಟ್ರೀಯ ನಾಯಕರಾಗಿ ಅವರ ಏಕಶಿಲಾ ಸಾಧನೆಗಳಿಗಾಗಿ ಅವರಿಗೆ ಮರಣೋತ್ತರವಾಗಿ “ಪದ್ಮವಿಭೂಷಣ” ನೀಡಿ ಗೌರವಿಸಿದ್ದಕ್ಕಾಗಿ ನಾವು ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಗಳಿಗೆ ಕೃತಜ್ಞರಾಗಿರುತ್ತೇವೆ.

ಮಹಾನ್ ನಾಯಕರನ್ನು ಅವರ ಜನ್ಮಸ್ಥಳದಲ್ಲಿ ಸರಿಯಾಗಿ ಗೌರವಿಸುವುದಿಲ್ಲ ಎಂಬ ಮಾತಿದೆ. ಆದರೆ ಮಂಗಳೂರಿನ ಬಿಜೈನಲ್ಲಿ ಹುಟ್ಟಿ ಇಡೀ ಭಾರತಕ್ಕೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ ಜಾರ್ಜ್ ಫೆರ್ನಾಂಡಿಸ್ ವಿಷಯದಲ್ಲಿ ಹಾಗಾಗದಿರಲಿ.

ಈ ಹಿನ್ನೆಲೆಯಲ್ಲಿ ಕದ್ರಿ ಪಾರ್ಕ್ನಿಂದ ಲಾಲ್‌ಬಾಗ್ ವರೆಗಿನ ಮುಖ್ಯ ರಸ್ತೆಗೆ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಿಡುವಂತೆ ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರದ ಶಾಸಕರು ಹಾಗೂ ರಾಜ್ಯ ಸರಕಾರಕ್ಕೆ ಶ್ರದ್ಧಾಪೂರ್ವಕವಾಗಿ ವಿನಂತಿಸುತ್ತೇವೆ.

Sneha Gowda

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

3 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

3 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

4 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

4 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

5 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

5 hours ago