ಬೆಳ್ತಂಗಡಿ: ಜೂ.2 ರಂದು ಗುರುವಾರ ಮಧ್ಯಾಹ್ನ ಬೆಳ್ತಂಗಡಿ ಯಲ್ಲಿ ಉತ್ತಮ ಮಳೆಯಾಗಿದ್ದು ಈ ವೇಳೆ ಗುರುವಾಯನಕೆರೆ ಪೇಟೆ ಸನಿಹದ ಬಂಟರ ಭವನದ ಎದುರಿನ ರಾಷ್ಟ್ರೀಯ ಹೆದ್ದಾರಿಯ ಮೇಲೆ ಮಳೆನೀರು ಹರಿದು ಕೃತಕ ನದಿಯಂತೆ ಕಂಡುಬಂತು.
ಗುರುವಾಯನಕೆರೆ ಪೇಟೆಯಿಂದ ಹರಿದು ಬಂದ ನೀರು ಪಕ್ಕದ ತೋಡಿಗೆ ಸೇರಿಕೊಳ್ಳಲು ಮಾರ್ಗವಿಲ್ಲದೆ ನೇರವಾಗಿ ಹೆದ್ದಾರಿ ಮೇಲೆ ಹರಿದು ಬಂಟರ ಭವನದ ಬಳಿಯ ತಗ್ಗು ಪ್ರದೇಶದಲ್ಲಿ ಶೇಖರಣೆಗೊಂಡಿತು.
ಇಲ್ಲೇ ಪಕ್ಕದಲ್ಲಿ ವಾಣಿಜ್ಯ ಮಳಿಗೆ, ಹೊಟೇಲ್, ಕೋಳಿ ಅಂಗಡಿ ಇತ್ಯಾದಿ ವ್ಯಾಪಾರ ಕೇಂದ್ರಗಳಿದ್ದು, ರಸ್ತೆ ಮೇಲೆ ವಾಹನ ಸಂಚರಿಸುವಾಗ ಎಲ್ಲರಿಗೂ ಕೆಸರು ನೀರಿನ ಸಿಂಚನವಾಯಿತು.
ಇದು ಈ ವರ್ಷದ ಮೊದಲ ಅನುಭವವೇನೂ ಅಲ್ಲ. ಪ್ರತೀ ವರ್ಷ ಮಳೆಗಾಲದಲ್ಲಿ ಇಲ್ಲಿನ ಗೋಳು ಇದೇ ಆಗಿದೆ. ಹೆದ್ದಾರಿ ಪ್ರಾಧಿಕಾರದವರು ಮಳೆಗಾಲಕ್ಕೂ ಮುನ್ನ ಚರಂಡಿ ಸ್ವಚ್ಛಗೊಳಿಸಿ, ಪ್ರತೀ ವರ್ಷ ಈ ರೀತಿ ಸಮಸ್ಯೆ ಎದುರಾಗುವ ಬಂಟರ ಭವನ ಪ್ರದೇಶ, ಉಜಿರೆ ಭಾರತ್ ಐಯರ್ನ್ ವರ್ಕ್ಸ್ ಮುಂಭಾಗದ ಪ್ರದೇಶದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದರಿಂದ ಮತ್ತ ಮತ್ತೆ ಇಲ್ಲಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅಡಚಣೆಗಳು ಆಗುತ್ತಲೇ ಬಂದಿದೆ. ಜೂನ್ ಮಳೆಗಾಲ ಆರಂಭವಾದರೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…
ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ದಿಲ್ಲಿ ಮುಖ್ಯಮಂತ್ರಿ…
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್ಗೆ ಪ್ರವೇಶಿಸಿದೆ. ಇನ್ನು ಆರ್ಸಿಬಿ…
ನಗರದ ಮಂಗಲಪೇಟ್ ಸಮೀಪದ ಮೆಥೋಡಿಸ್ಟ್ ಚರ್ಚ್ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.