ಬಂಗ್ರಕೂಳೂರು ರಾಷ್ಟ್ರೀಯ ಹೆದ್ದಾರಿ ಕರಾವಳಿ ಕಾಲೇಜು ಬಳಿ ನಡೆಯುತ್ತಿರುವ ಅವೈಜ್ಞಾನಿಕ ಅಂಡರ್ಪಾಸ್ ಚರಂಡಿ ಕಾಮಗಾರಿಯನ್ನು ತಡೆಹಿಡಿದು ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಬೇಕೆಂದು ಒತ್ತಾಯಿಸಿ ಕೊಟ್ಟಾರ ಚೌಕಿ ಸುತ್ತಮುತ್ತಲಿನ ವ್ಯಾಪ್ತಿಯ ನಾಗರಿಕರು ಇಂದು ಪ್ರತಿಭಟನೆ ನಡೆಸಿದರು.
ಕೊಟ್ಟಾರ ಚೌಕಿ ವ್ಯಾಪ್ತಿಯ ಮಾಲೆಮಾರ್, ಬಂಗ್ರಕೂಳೂರು, ಮಾಲಾಡಿ ಸುತ್ತಮುತ್ತಲಿನ ಪ್ರದೇಶವು ಮಳೆಗಾಲದಲ್ಲಿ ಪ್ರತೀ ವರ್ಷವೂ ನೆರೆಬರುವ ತಗ್ಗು ಪ್ರದೇಶಗಳಾಗಿದೆ. ಈ ಹಿಂದೆ ಇಲ್ಲಿನ ತಗ್ಗುದಾದ ಪ್ರದೇಶಗಳು ಎತ್ತರಗೊಂಡ ಪರಿಣಾಮ ನೆರೆಯ ಪ್ರಮಾಣ ಹೆಚ್ಚಾಗುತ್ತ ಬಂತು. ಅಲ್ಲದೇ ರಾಜಕಾಲುವೆಗಳ ಒತ್ತುವರಿ, ಹೂಳು ತುಂಬುವಿಕೆ ಮುಂತಾದ ಸಮಸ್ಯೆಗಳಿಂದ ಮಳೆಗಾಲದಲ್ಲಿ ನಿರಂತರವಾಗಿ ಈ ಭಾಗದ ನಾಗರಿಕರು ಆತಂಕದಿಂದ ಬದುಕಬೇಕಾಗಿದೆ. ಈ ಬಗ್ಗೆ ಸ್ಥಳೀಯರು ನಿರಂತರ ಅಹವಾಲುಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ.
2018 ರಲ್ಲಿ ವಿಪರೀತ ಮಳೆ ಬಂದು ಹೆದ್ದಾರಿ ಜಲಾವೃತಗೊಂಡಿತ್ತು ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿ ಕೋಟ್ಯಾಂತರ ನಷ್ಟ ಉಂಟಾಗಿತ್ತು ಆಗ ಕರಾವಳಿ ಕಾಲೇಜು ಎದುರು ಸಣ್ಣದಾಗಿದ್ದ ಕಾಲುವೆಯನ್ನು ತೆರವುಗೊಳಿಸಲು ನಗರ ಪಾಲಿಕೆ ಮುಂದಾಗಿತ್ತು. ಆದರೆ ಇದಕ್ಕೆ ತಡೆ ಒಡ್ಡಲಾಗಿತ್ತು ಇದೀಗ ಹೆದ್ದಾರಿ ಪ್ರಾಧಿಕಾರದವರು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದಾರೆ. ಆದರೆ ಯಾರದೋ ಒತ್ತಡಕ್ಕೆ ಮಣಿದು ಅವೈಜ್ಞಾನಿಕವಾಗಿ ಅಂಡರ್ ಪಾಸ್ ಚರಂಡಿ ನಿರ್ಮಿಸಲು ಹೊರಟಿರುವುದು ಆಶ್ಚರ್ಯಕರವಾಗಿದೆ .
ಈ ಜಾಗದಲ್ಲಿ ತೆರೆದ ಚರಂಡಿ ಅಗತ್ಯವಿದ್ದು ಅಂಡರ್ ಪಾಸ್ ಚರಂಡಿ ನಿರ್ಮಾಣ ಸರಕಾರದ ದುಡ್ಡನ್ನು ಪೋಲು ಮಾಡುವ ಯೋಜನೆಯಾಗಿದೆ. ಒಬ್ಬ ಬಲಾಡ್ಯ ವ್ಯಕ್ತಿಯ ಹಿತಕ್ಕಾಗಿ ಸಾರ್ವಜನಿಕರನ್ನು ನಿರಂತರ ಸಮಸ್ಯೆಗಳಿಗೆ ಒಡ್ಡುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ನಗರಪಾಲಿಕೆ ಆಯುಕ್ತರು ಆಗಮಿಸಿ ಮನವಿ ಸ್ವೀಕರಿಸಿದರು ಸಮರ್ಪಕ ನಿರ್ದಾರಕ್ಕೆ ಬರುವವರೆಗೆ ಕಾಮಗಾರಿಯನ್ನು ತಡೆ ಹಿಡಿಯಲು ಸೂಚಿಸಿದರು.
ಪ್ರತಿಭಟನಾ ಸ್ಥಳದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳು, ಮಾಜಿ ಉಪಮೇಯರ್, ಮಾಜಿ ಕಾರ್ಪೊರೇಟರ್ರವರುಗಳು ಉಪಸ್ಥಿತರಿದ್ದು ಬೆಂಬಲ ನೀಡಿದರು. ಮಾಲೆಮಾರ್, ಮಾಲಾಡಿ, ಕೊಟ್ಟಾರ ಚೌಕಿ, ಕೋಡಿಕಲ್, ಪಂಜಿಮೊಗರು ಪ್ರದೇಶದ ನಾಗರಿಕರು, ರಿಕ್ಷಾ ಪಾರ್ಕ್ ಸದಸ್ಯರುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಘಾಟ್ ಬಳಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.
ಫ್ಲಾಟ್ಗಳನ್ನು ನಿರ್ಮಿಸಲು ಎಂಟು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗವು ಎಫ್ಐಆರ್…
ಪಟ್ಟಣದ ಬೈಪಾಸ್ ಬಳಿ ಅಣ್ಣಿಗೇರಿಯಿಂದ ಹುಬ್ಬಳ್ಳಿ ರಸ್ತೆಗೆ ಸೇರುವ ರಸ್ತೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಾರಿಗೆ ಬಸ್ ಮತ್ತು ತರಕಾರಿ…
ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ರೋಟರಿಗೆ ಬಾಲಕ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಡಿವಾಣ ಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾಸುಕುಮಾರ ಅವರನ್ನು ಬದಲಾವಣೆ ಮಾಡಬೇಕು ಅಂತ…
ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…