ಮಂಗಳೂರು : ಬಜಪೆ ದ್ವಿತೀಯ ಸಂತ ಜೋನ್ ಪಾವ್ಲರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ 2022 ಫೆ. 28 ರಿಂದ ಮಾರ್ಚ್ 1 ರ ವರೆಗೆ ನಡೆಯಲಿದೆ ಎಂದು ಬಜಪೆ ದ್ವಿತೀಯ ಸಂತ ಜೋನ್ ಪಾವ್ಲರ ಪುಣ್ಯಕ್ಷೇತ್ರದ ವಿಗಾರ್,ರೆಕ್ಟರ್ ಫಾ. ರೊನಾಲ್ಡ್ ಕುಟಿನ್ಹೊ ತಿಳಿಸಿದರು.
ಈ ವೇಳೆ ಮಾಹಿತಿ ನೀಡಿದ ಅವರು ಮೂರು ದಿನ ಕ್ಷೇತ್ರದಲ್ಲಿ ವಿಶೇಷ ನೋವೆನ ಪ್ರಾರ್ಥನಾ ಕಾರ್ಯ ನೆಡೆಯಲಿದೆ ಮಾತ್ರವಲ್ಲದೆ ಫೆಬ್ರವರಿ 28 ರಂದು ಜೆಪ್ಪು ಸೆಮಿನರಿ ಪ್ರಾಧ್ಯಾಪಕರಾದ ಫಾ ಜೋಸೆಫ್ ಮಾರ್ಟಿಸ್ ಬಲಿಪೂಜೆ ನೆರವೇರಿಸಲಿದ್ದು.
ಮಾರ್ಚ್ 1 ರಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಫಾ. ಪೀಟರ್ ಪೌಲ್ ಸಲ್ಡಾನ್ಹಾ ಬಲಿಪೂಜೆ ನೆರವೇರಿಸಲಿದ್ದಾರೆ ಎಂದವರು ಹೇಳಿದರು. ಈ ವೇಳೆ ಕ್ಷೇತ್ರದ ನಿರ್ದೇಶಕ ಫಾ. ರೋಹಿತ್ ಡಿಕೋಸ್ಟಾ, ಸಹಾಯಕ ಧರ್ಮ ಗುರುಗಳಾದ ಫಾ. ಕ್ಲಾನಿ ಡಿಕೊಸ್ಟಾ, ಫಾ. ರೋಶನ್ ಡಿಕುನ್ಹಾ, ಉಪಾಧ್ಯಕ್ಷರಾದ ಸಂತೋಷ್ ಡಿಸೋಜ, ಕಾರ್ಯದರ್ಶಿ ಜೂಲಿಯೆಟ್ ಮೊರಸ್ ಮತ್ತಿತರರು ಉಪಸ್ಥಿತರಿದ್ದರು.
ಈಜಲು ಹೋಗಿದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.
ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…
ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು…
ಗಡಿಬಿಡಿಯ ಜೀವನದಲ್ಲಿ ಬೆಳಗ್ಗಿನ ಉಪಹಾರ ಮಾಡಿಕೊಂಡು ಆಫೀಸಿಗೆ ಹೋಗುವುದೇ ಸವಾಲ್. ಇಂತಹ ಸಂದರ್ಭದಲ್ಲಿ ಅವಲಕ್ಕಿ ಇದ್ದರೆ ಅದರಿಂದ ಹುಳಿ ತಯಾರಿಸಿ…
ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ…
ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ…