ಮಂಗಳೂರು: ಎಸ್.ಪಿ.ವೈ.ಎಸ್.ಎಸ್ ಕರ್ನಾಟಕ ಯೋಗ ಸಮಿತಿಯ ವತಿಯಿಂದ ಸೋಮವಾರ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮವನ್ನು ಕದ್ರಿ ಯುದ್ದ ಸ್ಮಾರಕ ದಲ್ಲಿ ಆಚರಿಸಲಾಯಿತು.
ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಯಿತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಸಮಿತಿಯಲ್ಲಿ ನಿತ್ಯ ಯೋಗ ಅಭ್ಯಾಸ ಮಾಡುತ್ತಿರುವವರು ಸೇರಿ ಸಾವಿರಾರು ಸಂಖ್ಯೆಯಲ್ಲಿ ನೇರಪ್ರಸಾರ ವೀಕ್ಷಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ರವೀಶ್ ಕುಮಾರ್ ಎಸ್.ಪಿ.ವೈ.ಎಸ್.ಎಸ್ ಪ್ರಾಂತ ಸಂಚಾಲಕರು ಸೇವಾವಿಭಾಗ ಮಾತನಾಡುತ್ತಾ ಸೈನಿಕ ಕೇವಲ ಸಂಬಳಕ್ಕಾಗಿ ಕೆಲಸ ಮಾಡುವುದಲ್ಲ. ಪ್ರಾಣದ ಹಂಗು ತೊರೆದು ದೇಶದ ಸೇವೆ ಮಾಡುತ್ತಾರೆ ಎಂದರು.
ಮಾಜಿ ಯೋಧ ವಸಂತ್ ಕಾಯರ್ಮಾರ್ ಸೇನೆಯಲ್ಲಿನ ತಮ್ಮ ಅನುಭವ ಹಂಚಿಕೊಂಡರು.
ದಿಕ್ಸೂಚಿ ಮಾತುಗಾರರಾಗಿ ಹರೀಶ್ ಕೋಟ್ಯಾನ್ ಮೂಲ್ಕಿ ಮಾತನಾಡುತ್ತಾ ನಮ್ಮಲ್ಲಿ ಸುಪ್ತವಾಗಿರುವ ದೇಶ ಭಕ್ತಿಯನ್ನು ಜಾಗೃತಗೊಳಿಸಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ.ದೇಶಕ್ಕಾಗಿ ಬಲಿದಾನ ಮಾಡಿದ ಯೋಧರನ್ನು ಸ್ಮರಿಸಿ, ದೇಶದ ಗಡಿ ಕಾಯುವ ಯೋಧರಿಗೆ ಶಕ್ತಿ ನೀಡಲೆಂದು ಪ್ರತಿನಿತ್ಯ ಪ್ರಾರ್ಥಿಸೋಣ ಎಂದರು.
ಕಾರ್ಯಕ್ರಮವನ್ನು ಅನಿತಾ ಕಾವೂರು ನಿರೂಪಣೆ ಮಾಡಿದರು. ಅರ್ಚನಾ ಹಾಗೂ ಅರುಣ ಕಟೀಲ್ ಪ್ರಾರ್ಥನೆ ಮಾಡಿದರು. ಗೋಕುಲ್ ನಾಥ್ ಶೆಣೈ ಸ್ವಾಗತಿಸಿದರು. ಜಯರಾಮ ಚೆಂಬುಗುಡ್ಡೆ ವಂದನಾರ್ಪಣೆ ಸಲ್ಲಿಸಿದರು. ಲೋಕನಾಥ ಬಜಪೆ ದೇಶಭಕ್ತಿ ಗೀತೆ ಹಾಡಿದರು. ವಿದ್ಯಾ ಗೌರಿ ವಂದೇ ಮಾತರಂ ಹಾಡಿದರು.
ಮಾಜಿ ಯೋಧರಾದ ಕಾಯರ್ಮಾರ್ ವಸಂತ್, ವಿಕ್ರಮದತ್ತ, ಹವಾಲ್ದಾರ್ ಪ್ರಕಾಶ್, ದೀಪಕ್ ಅಡ್ಯಂತಾಯ, ಪ್ರಭಾಕರ್ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ದಯಾನಂದ ಕಟೀಲು ಯೋಧರನ್ನು ಪರಿಚಯಿಸಿದರು. ಶಿವಾನಂದ ರೈ ಪುಷ್ಪಾರ್ಚನೆ ಮಾಡಲು ಸೂಚನೆ ನೀಡಿದರು.
ಜಿಲ್ಲಾ ಸಂಚಾಲಕರಾದ ಅಶೋಕ್ ಕುಮಾರ್ ಜೈನ್, ಮಹಿಳಾ ಸಂಚಾಲಕಿ ಭಾರತಿ, ಲಕ್ಷ್ಮೀನಾರಾಯಣ, ಪ್ರತಾಪ್ ಕೆ.ಎಸ್.ಕನಕ ಬಜ್ಪೆ, ಲೀಲಾ ಯೆಯ್ಯಾಡಿ, ಉಮೇಶ ಪೊಳಲಿ, ಹರೀಶ್ ಸುರತ್ಕಲ್, ಅನಂದ, ಉಮೇಶ್ ಕದ್ರಿ, ಈಶ್ವರ ಕೊಟ್ಟಾರಿ ಉಪಸ್ಥಿತರಿದ್ದರು.
ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ…
ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್ಫ್ಲಿಕ್ಸ್ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…
ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…
ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…
ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…
ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಇಂದು ಸಂಭವಿಸಿದೆ