Categories: ಮಂಗಳೂರು

ಉಜಿರೆ: ರಾಜ್ಯ ಸಾಹಿತ್ಯ ಅಧಿವೇಶನದಲ್ಲಿ ‘ಸಾಹಿತ್ಯ – ಸ್ವಾತಂತ್ರ‍್ಯ- ಸ್ವಧರ್ಮ’

ಬೆಳ್ತಂಗಡಿ : ಅಖಿಲ ಭಾರತ ಸಾಹಿತ್ಯ ಪರಿಷತ್,ಕರ್ನಾಟಕ ಆಯೋಜಿಸಿರುವ ‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ 3 ನೆಯ ರಾಜ್ಯ ಅಧಿವೇಶನ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ‘ಸಾಹಿತ್ಯ – ಸ್ವಾತಂತ್ರ‍್ಯ ನಡುವಿನ ನಂಟು’ ಎಂಬ ವಿಷಯದ ಕುರಿತ ವಿಷಯ ಮಂಡನೆ ಅವಧಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿಅವಲೋಕಕಿಯಾಗಿ ಬೆಂಗಳೂರಿನ ಖ್ಯಾತ ವಿಮರ್ಶಕಿ ಡಾ.ಎ.ಎನ್.ಆರ್ ಲಲಿತಾಂಬ, ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತ್ಯ ಪರಿಚಾರಕ ಹರ್ಷವರ್ಧನ್ ಶೀಲವಂತ ಮತ್ತು ಪ್ರಸಿದ್ಧ ಅಂಕಣಕಾರ ಹಾಗೂ ವಾಗ್ಮಿ ರೋಹಿತ್‌ ಚಕ್ರತೀರ್ಥ ಭಾಗವಹಿಸಿ ಸ್ವಾತಂತ್ರ‍್ಯದಲ್ಲಿ ಸಾಹಿತ್ಯ ವಿಚಾರಗಳ ಕುರುತುಉಪನ್ಯಾಸ ನೀಡಿದರು.

‘ಸಾಹಿತ್ಯದಲ್ಲಿ ಮೊದಲನೆಯ ಸ್ವಾತಂತ್ರ‍್ಯಹೋರಾಟ’ ಎಂಬ ವಿಷಯದ ಕುರಿತು ಮಾತನಾಡಿದ ಸಾಹಿತ್ಯ ಪರಿಚಾರಕ ಹರ್ಷವರ್ಧನ ಶೀಲವಂತ ಸ್ವಾತಂತ್ರ‍್ಯ  ಪೂರ್ವದಲ್ಲಿ ಭಾರತೀಯರು ಅನುಭವಿಸಿದ ಸಂಕಷ್ಟಗಳನ್ನು ವಿವಿಧ ಪುಸ್ತಕಗಳ ಹಾಗೂ ಗ್ರಂಥಗಳ ಉಲ್ಲೇಖದ ಸಾಕ್ಷ್ಯಗಳನ್ನು ಸಭಿಕರ ಮುಂದಿಟ್ಟರು.

ಇತಿಹಾಸ ಪಠ್ಯಪುಸ್ತಕವು ಕ್ರಾಂತಿಕಾರಿಗಳನ್ನು ಸರಿಯಾಗಿ ವಿದ್ಯಾರ್ಥಿಗಳಿಗೆ ಅರ್ಧೈಸಿಲ್ಲ. ಕ್ರಾಂತಿಕಾರಿಗಳು ಕೇವಲ ಬಂದೂಕು ಹಿಡಿಯದೆ, ಯುದ್ಧತಂತ್ರಗಾರಿಕೆಯನ್ನು ರೂಪಿಸಿ ಸಾಹಿತ್ಯದ ಮೂಲಕ ಸ್ವರಾಜ್ಯದಕಲ್ಪನೆಯನ್ನು ನೀಡಿದರು ಎಂದು ಅಂಕಣಕಾರರಾದ ರೋಹಿತ್‌ ಚಕ್ರತೀರ್ಥ ‘ಸಾಹಿತ್ಯದಲ್ಲಿಕ್ರಾಂತಿಕಾರ್ಯ’ ವಿಷಯ ಮಂಡಿಸಿದರು.

ಮಾತನ್ನು ಮುಂದುವರೆಸಿ ಭಾರತೀಯರ ಮೂರ್ಖತನ, ಆಲಸ್ಯ, ನಿಷ್ಕ್ರಿಯತೆ ಬ್ರಿಟೀಷ್ ಸಾಮ್ರಾಜ್ಯ ಬೀಳದಿರಲು ಮುಖ್ಯಕಾರಣಎಂದು 19 ನೆಯ ಶತಮಾನದಅಂತ್ಯದಲ್ಲಿ ಹೋರಾಟಗಾರಜತಿನ್‌ತಮ್ಮ ಪತ್ರಿಕೆಯಲ್ಲಿಅಭಿಪ್ರಾಯ ಪಟ್ಟಿದ್ದಾರೆ. ಬಾಲ ಗಂಗಾಧರತಿಲಕ್‌ತಮ್ಮ ಮರಾಠ ಹಾಗೂ ಕೇಸರಿ ಪತ್ರಿಕೆಗಳಲ್ಲಿ, ಸಾವರ್ಕರ್‌ತಮ್ಮ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಪುಸ್ತಕದಲ್ಲಿ ಸಾಹಿತ್ಯದ ಮೂಲಕ ಜನರಲ್ಲಿಆತ್ಮಾಭಿಮಾನ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಪತ್ರಿಕೆಗಳು ಆರ್ಥಿಕಉದ್ದೇಶ ಹೊಂದಿರದೆ ಸ್ವಾತಂತ್ರ‍್ಯದಕಿಚ್ಚನ್ನು ಹೆಚ್ಚಿಸುತ್ತಿದ್ದವುಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಮರ್ಶಕಿಡಾ.ಎನ್.ಆರ್. ಲಲಿತಾಂಬಾ ನಮ್ಮ ನೆಲದ,ಜಲದಕಥನವನ್ನುಇದ್ದಹಾಗೆ ಸ್ಪಷ್ಟವಾಗಿ ಹೇಳುವ ಚರಿತ್ರೆ ಬೇಕಾಗಿದೆ, ಆಕರಗಳ ಶೋಧದೊಂದಿಗೆ, ಅಕ್ಷರರೂಪದಅಭಿವ್ಯಕ್ತಿಯಾದ ದಾಖಲೆಗಳ ಶೋಧವಾಗಬೇಕಾಗಿದೆಎಂದರು.

ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಸಾಹಿತ್ಯಆಸಕ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅ.ಭಾ.ಸಾ.ಭಕಾರ್ಯಕರ್ತಗೋವಿಂದ ಶರ್ಮಾಕಾರ್ಯಕ್ರಮ ನಿರೂಪಿಸಿದರು.

Gayathri SG

Recent Posts

ದೇಶದ ಸಂಪೂರ್ಣ ಸಂಪತ್ತನ್ನು ಶ್ರೀಮಂತರಿಗೆ ಕೊಟ್ಟಿದ್ದಾರೆ ಮೋದಿ: ಪ್ರಿಯಾಂಕಾ ವಾಗ್ದಾಳಿ

ಇಲ್ಲಿನ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ 'ಕೈ' ನಾಯಕ ರಾಹುಲ್ ಗಾಂಧಿ ಪರ ಪ್ರಚಾರ ಮಾಡಲು ಆಗಮಿಸಿದ ಅವರ…

16 mins ago

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.  ಗುಟ್ಕಾ, ಎಲೆಅಡಿಕೆ, ತಂಬಾಕು ಅಗೆಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು…

31 mins ago

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು…

54 mins ago

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

1 hour ago

ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…

1 hour ago

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

2 hours ago