ಕುಂದಾಪುರ: ಮನೆಯಂಗಳದಲ್ಲಿ ಇದ್ದ ಕಾರಿಗೆ ಟೋಲ್ ಹಣ ಕಡಿತವಾದ ಘಟನೆ ಸಂಭವಿಸಿದೆ. ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡೆಅಂಗಡಿಯ ವರ್ತಕ ರಾಘವೇಂದ್ರ ಬ್ರಹ್ಮರಕೂಟ್ಟುಟೋಲ್ ಪ್ರಭು ಅವರ ಕಾರು ಮೇ 16ರಂದು ಬಿ.ಸಿ.ರೋಡ್ನ ಪ್ಲಾಜಾದ ಮೂಲಕ ಸಾಗಿರುವುದಾಗಿ ಹೇಳಿ ಫಾಸ್ಟಾಗ್ ವ್ಯಾಲೆಟ್ನಿಂದ ಹಣ ಕಡಿತವಾಗಿರುವ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿತ್ತು. ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಹೇಳಿ ಟೋಲ್ನವರು ಹಣವನ್ನು ಮರಳಿ ನೀಡಿದ್ದರು.
ಅದೇರೀತಿ ಕುಂದಾಪುರದ ಶಾಸ್ತ್ರಿಸರ್ಕಲ್ನ ಅಪ್ಸರಾ ಬ್ಯಾಗ್ ಆ್ಯಂಡ್ ಫ್ಯಾನ್ಸಿಯ ಮಾಲೀಕ ಮಹಮ್ಮದ್ ರಫೀಕ್ ಅವರ ಮೊಬೈಲ್ ಗೆ ಸಂದೇಶವೊಂದು ಬಂದಿದ್ದು, ತೆರೆದು ನೋಡಿದರೆ ಅದೇ ಬ್ರಹ್ಮರಕೂಟ್ಟು ಟೋಲ್ ಪ್ಲಾಜಾದ ಮೂಲಕ ಅವರ ವಾಹನ ಹಾದು ಹೋಗಿದೆ ಎಂದು 30 ರೂ. ಪೇಟಿಎಂ ವ್ಯಾಲೆಟ್ ನಿಂದ ಕಡಿತವಾಗಿರುವ ಮಾಹಿತಿ ಇತ್ತು. ಅವರ ಝನ್ ಎಸ್ಪಿಲೊ ವಾಹನ ಮಾತ್ರ ಅಲ್ಲೇ ಅಂಗಡಿ ಬಳಿಯಲ್ಲೇ ಇತ್ತು!
ಬಳಿಕ ಅವರು ಟೋಲ್ ಪ್ಲಾಜಾದ ನಿರ್ವಾಹಕ ನವೀನ್ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರು. ಸ್ವಲ್ಪ ಹೊತ್ತಿನಲ್ಲಿ ಟೋಲ್ನವರು ಹಣ ಮರಳಿಸಿದ್ದಾರೆ. ಆದರೆ ಇಂತಹ ಆಚಾತುರ್ಯಗಳು ಪದೇ ಪದೆ ಸಂಭವಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಅರಣ್ಯಗಳಲ್ಲಿ ಕಾಡ್ಗಿಚ್ಚಿನ ಭಯವೂ ಶುರುವಾಗಿದ್ದು, ಇದೀಗ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ…
ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆ ಗಾಳಿಗೆ ಬಾಳೆ ಸೇರಿದಂತೆ ಗಿಡ ಮರಗಳು ನೆಲಕ್ಕುರುಳಿವೆ. ಸುಮಾರು ಒಂದು ಗಂಟೆಗಳ ಕಾಲ…
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ. 03 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ…
ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯ ನವನಗರ…
ಬಿರು ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ನಗರಕ್ಕೆ ತಂಪೆರೆಯಿತಾದರೂ…
ಟ್ಯೂಷನ್ ಗೆ ಬಿಡುವ ನೆಪದಲ್ಲಿ ಸ್ವಂತ ತಂಗಿಯ ಅಪ್ರಾಪ್ತ ಮಗಳನ್ನ ಕರೆದೊಯ್ದ ಕಾಮುಕ ಸೋದರಮಾವ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ನಂಜನಗೂಡಿನಲ್ಲಿ…