News Karnataka Kannada
Wednesday, May 01 2024
ಕಾಸರಗೋಡು

ಕಾಸರಗೋಡಿಗೂ ವಿಸ್ತಾರಗೊಂಡ ವಂದೇ ಭಾರತ್ ರೈಲು

Vande Bharat train extended to Kasargod
Photo Credit : By Author

ಕಾಸರಗೋಡು: ತಿರುವನಂರಾಪುರದಿಂದ ಕಣ್ಣೂರು ತನಕ ಸಂಚಾರ ನಡೆಸಲುದ್ದೇಶಿಸಿದ್ದ ಕೇರಳದ ಮೊದಲ ವಂದೇ ಭಾರತ್ ರೈಲನ್ನು ಕಾಸರಗೋಡಿಗೂ ವಿಸ್ತರಿಸಲಾಗಿದೆ.

ಮೊದಲ ಪ್ರಾಯೋಗಿಕ ಸಂಚಾರ ಬುಧವಾರ ನಡೆಸಿದ್ದು, ಮಧ್ಯಾಹ್ನ ಕಾಸರಗೋಡು ಮೂಲಕ ಹಾದು ಹೋಗಿದೆ.ತಿರುವನಂತಪುರದಿಂದ ೭ ಗಂಟೆ ೫೦ ನಿಮಿಷದಲ್ಲಿ ರೈಲು ಕಾಸರಗೋಡಿಗೆ ತಲಪಿದೆ.

ಕಾಸರಗೋಡು ರೈಲು ನಿಲ್ದಾಣದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ , ಶಾಸಕ ಎನ್.ಎ.ನೆಲ್ಲಿಕುನ್ನು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವಂದೇ ಭಾರತ್ ರೈಲು ತಿರುವನಂತಪುರದಿಂದ ಕಣ್ಣೂರು ತನಕ ಮಾತ್ರ ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮತಿ ನೀಡಿತ್ತು. ಇದರಂತೆ ಎರಡು ದಿನಗಳ ಹಿಂದೆ ಈ ದಾರಿಯಾಗಿ ಸಂಚಾರ ನಡೆಸಿತ್ತು. ಈ ಹಿನ್ನಲೆಯಲ್ಲಿ ರೈಲನ್ನು ಕಾಸರಗೋಡಿಗೂ ವಿಸ್ತರಿಸಬೇಕು. ಮಂಗಳೂರು ತನಕ ರೈಲು ಸಂಚಾರ ಬೆಳಸಬೇಕು ಎಂದು ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ಸೇರಿದಂತೆ ಹಲವು ವಲಯಗಳಿಂದ ಕೇಂದ್ರ ಮೇಲೆ ಒತ್ತಡ ಹೇರಲಾಗಿತ್ತು. ಈ ಬಗ್ಗೆ ವಿಸ್ತರಿಸುವ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಿ ಭರವಸೆ ನೀಡಿದ್ದರು. ಇದರಂತೆ ಬುಧವಾರ ಪ್ರಾಯೋಗಿಕ ಸಂಚಾರ ನಡೆಸಿದೆ.ಏಪ್ರಿಲ್ ೨೫ ರಿಂದ ರೈಲು ಅಧಿಕೃತ ಸಂಚಾರ ನಡೆಸಲಿದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು