ಕಾಸರಗೋಡು: ತಿರುವನಂರಾಪುರದಿಂದ ಕಣ್ಣೂರು ತನಕ ಸಂಚಾರ ನಡೆಸಲುದ್ದೇಶಿಸಿದ್ದ ಕೇರಳದ ಮೊದಲ ವಂದೇ ಭಾರತ್ ರೈಲನ್ನು ಕಾಸರಗೋಡಿಗೂ ವಿಸ್ತರಿಸಲಾಗಿದೆ.
ಮೊದಲ ಪ್ರಾಯೋಗಿಕ ಸಂಚಾರ ಬುಧವಾರ ನಡೆಸಿದ್ದು, ಮಧ್ಯಾಹ್ನ ಕಾಸರಗೋಡು ಮೂಲಕ ಹಾದು ಹೋಗಿದೆ.ತಿರುವನಂತಪುರದಿಂದ ೭ ಗಂಟೆ ೫೦ ನಿಮಿಷದಲ್ಲಿ ರೈಲು ಕಾಸರಗೋಡಿಗೆ ತಲಪಿದೆ.
ಕಾಸರಗೋಡು ರೈಲು ನಿಲ್ದಾಣದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ , ಶಾಸಕ ಎನ್.ಎ.ನೆಲ್ಲಿಕುನ್ನು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ವಂದೇ ಭಾರತ್ ರೈಲು ತಿರುವನಂತಪುರದಿಂದ ಕಣ್ಣೂರು ತನಕ ಮಾತ್ರ ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮತಿ ನೀಡಿತ್ತು. ಇದರಂತೆ ಎರಡು ದಿನಗಳ ಹಿಂದೆ ಈ ದಾರಿಯಾಗಿ ಸಂಚಾರ ನಡೆಸಿತ್ತು. ಈ ಹಿನ್ನಲೆಯಲ್ಲಿ ರೈಲನ್ನು ಕಾಸರಗೋಡಿಗೂ ವಿಸ್ತರಿಸಬೇಕು. ಮಂಗಳೂರು ತನಕ ರೈಲು ಸಂಚಾರ ಬೆಳಸಬೇಕು ಎಂದು ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ಸೇರಿದಂತೆ ಹಲವು ವಲಯಗಳಿಂದ ಕೇಂದ್ರ ಮೇಲೆ ಒತ್ತಡ ಹೇರಲಾಗಿತ್ತು. ಈ ಬಗ್ಗೆ ವಿಸ್ತರಿಸುವ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಿ ಭರವಸೆ ನೀಡಿದ್ದರು. ಇದರಂತೆ ಬುಧವಾರ ಪ್ರಾಯೋಗಿಕ ಸಂಚಾರ ನಡೆಸಿದೆ.ಏಪ್ರಿಲ್ ೨೫ ರಿಂದ ರೈಲು ಅಧಿಕೃತ ಸಂಚಾರ ನಡೆಸಲಿದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡುವರು.