ಕಾಸರಗೋಡು: ವಿದ್ಯುತ್ ಸಾಮಾಗ್ರಿಗಳನ್ನು ಕಳವು ಗೈಯ್ಯು ತ್ತಿದ್ದ ತಮಿಳುನಾಡು ಮೂಲದ ಅಯ್ಯಪ್ಪನ್ (30) ಮತ್ತು ಎಯಿಮಲೈ (31) ಬಂಧಿತ ಆರೋಪಿಗಳನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪನಯಾಲ್ ಬಟ್ಟತ್ತೂರಿನ ಮೇಘ ವಿದ್ಯುತ್ ಕಂಪೆನಿಯ ವಿದ್ಯುತ್ ಉಪಕರಣ ಗಳನ್ನು ಕಳವು ಗೈದಿದ್ದು,ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.