ಕಾಸರಗೋಡು: ಅಬಕಾರಿ ದಳದ ತಪಾಸಣೆಯಿಂದ ತಪ್ಪಿಸಲೆತ್ನಿಸಿದ ಮದ್ಯ ಸಾಗಾಟ ಕಾರು ಅಬಕಾರಿ ದಳದ ಜೀಪಿಗೆ ಡಿಕ್ಕಿ ಹೊಡೆಸಿದ ಘಟನೆ ಉಪ್ಪಳ ಸೋಂಕಾಲ್ ನಲ್ಲಿ ನಡೆದಿದ್ದು,ಐವರು ಗಾಯಗೊಂಡಿದ್ದಾರೆ.
ಮೂವರು ಅಬಕಾರಿ ಸಿಬ್ಬಂದಿಗಳು ಹಾಗೂ ಕಾರಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ ಕಾಸರಗೋಡು ಅಬಕಾರಿ ದಳದ ಸರ್ಕಲ್ ಇನ್ಸ್ ಪೆಕ್ಟರ್ ಜೋಯ್ ಜೋಸೆಫ್ , ದಿವಾಕರನ್ , ದಿಜಿತ್ ಹಾಗೂ ಕಾರಲ್ಲಿದ್ದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಿಂದ ೧೧೦ ಲೀಟರ್ ಕರ್ನಾಟಕ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರಿನಲ್ಲಿ ಮದ್ಯ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯಂತೆ ಸೋಂಕಾಲ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅತೀ ವೇಗದಿಂದ ಬಂದ ಕಾರನ್ನು ತಡೆಯಲೆತ್ನಿಸಿದಾಗ ಜೀಪಿಗೆ ಡಿಕ್ಕಿ ಹೊಡೆಸಿದ್ದು , ಗಾಯಾಳುಗಳನ್ನು ನಾಗರಿಕರು ಆಸ್ಪತ್ರೆಗೆ ತಲಪಿಸಿದರು. ಕಾರನ್ನು ಉಳಿದ ಅಗ್ನಿಶಾಮಕ ದಳದ ಸಿಬಂದಿಗಳು ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಸಾಗಾಟ ಪತ್ತೆಯಾಗಿದೆ.