ಕಾಸರಗೋಡು : ಕಾಡಾನೆ ಸೇರಿದಂತೆ ವನ್ಯಮೃಗಗಳ ಹಾವಳಿಯಿಂದ ಕೃಷಿ ವಲಯಕ್ಕೆ ಅಪಾರ ಹಾನಿ ಉಂಟಾಗುತ್ತಿದ್ದರೂ ಈ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ಕೃಷಿಕರ ಒಕ್ಕೂಟ ವತಿಯಿಂದ ಗುರುವಾರ ಕಾಸರಗೋಡು ಜಿಲ್ಲಾ ಅರಣ್ಯ ಕಚೇರಿಗೆ ಜಾಥಾ ನಡೆಸಲಾಯಿತು.
ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಆರಂಭಗೊಂಡ ಮೆರವಣಿಗೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಬಳಿಕ ನಡೆದ ಪ್ರತಿಭಟನೆಯನ್ನು ಒಕ್ಕೂಟದ ಅಧ್ಯಕ್ಷ ಸಿ . ರಾಮಕೃಷ್ಣನ್ ಉದ್ಘಾಟಿಸಿದರು.
ಸಂಚಾಲಕ ಟಿ . ಗೋಪಿ ನಾಥನ್ ನಾಯರ್ , ಸುರೇಶ್ , ಕೃಷ್ಣನ್ ನಾಯರ್, ಸುಧಾಕರ ಮೊದಲಾದವರು ಮಾತನಾಡಿದರು