News Karnataka Kannada
Monday, April 29 2024
ಕರಾವಳಿ

ಮೈಸೂರಿನಲ್ಲಿ ಅಪಘಾತ: ಕಾಸರಗೋಡಿನ ಯುವಕರಿಬ್ಬರು ಮೃತ್ಯು

Photo Credit :

ಮೈಸೂರಿನಲ್ಲಿ ಅಪಘಾತ: ಕಾಸರಗೋಡಿನ ಯುವಕರಿಬ್ಬರು ಮೃತ್ಯು

ಕಾಸರಗೋಡು: ಮೈಸೂರಿನಲ್ಲಿ ಪಿಕಪ್ ವ್ಯಾನ್ ಮತ್ತು ಕೆಎಸ್ ಆರ್ ಟಿಸಿ ಬಸ್ ನಡುವೆ ಉಂಟಾದ ಅಪಘಾತದಲ್ಲಿ ಕಾಸರಗೋಡಿನ ಇಬ್ಬರು ಯುವಕರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತಪಟ್ಟವರನ್ನು ಉಳಿಯತ್ತಡ್ಕದ ಜುನೈದ್ (26) ಮತ್ತು ಅಝರುದ್ದೀನ್(26) ಎಂದು ಗುರುತಿಸಲಾಗಿದೆ.

ಮೈಸೂರು-ಬೆಂಗಳೂರು ರಸ್ತೆಯ ಹುಣಸೂರು ಎಂಬಲ್ಲಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಅಪಘಾತದ ರಭಸಕ್ಕೆ ಪಿಕಪ್ ವ್ಯಾನ್ ನಜ್ಜುಗುಜ್ಜಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಹರಸಾಹಸಪಟ್ಟು ಮೃತದೇಹಗಳನ್ನು ಹೊರತೆಗೆದರು.

ಇಬ್ಬರು ಸಾಮಗ್ರಿ ಖರೀದಿಗೆ ಬೆಂಗಳೂರಿಗೆ ತೆರಳಿದ್ದರು. ಮಂಗಳವಾರ ಬೆಳಗ್ಗೆ ಇಬ್ಬರೂ ಕಾಸರಗೋಡಿನಿಂದ ಪ್ರಯಾಣ ಬೆಳೆಸಿದ್ದರು. ಮಾಹಿತಿ ತಿಳಿದು ಸಂಬಂಧಿಕರು ಮೈಸೂರಿಗೆ ತೆರಳಿದ್ದು, ರಾತ್ರಿ ಮೃತದೇಹಗಳನ್ನು ಊರಿಗೆ ತರುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು