ರಾಯಚೂರು: ಜ.22ರಂದು ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಬಳಿಕ ಅಯೋಧ್ಯೆಯಲ್ಲಿ 48 ದಿನಗಳ ಪೂಜಾ ಕೈಂಕರ್ಯ ನೆರವೇರಲಿದೆ. ಮಂಡಲ ಪೂಜೆ, ರುದ್ರಾಭಿಷೇಕ, ಬ್ರಹ್ಮೋತ್ಸವ ಸೇರಿ ಇನ್ನಿತರ ಪೂಜೆಗಳು ನಡೆಯಲಿವೆ.
ಆ ಮಂಡಲ ಪೂಜೆಗೆ ರಾಯಚೂರು ಜಿಲ್ಲೆಯ ಇಬ್ಬರು ಪಂಡಿತರು ಆಯ್ಕೆ ಆಗಿದ್ದಾರೆ. ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದ ಆದಯ್ಯ ಸ್ವಾಮಿ ಹಾಗೂ ಮಸ್ಕಿ ತಾಲೂಕಿನ ಹಸಮಕಲ್ನ ಶ್ರೀಧರ್ ಸ್ವಾಮಿ ಆಯ್ಕೆ ಆಗಿದ್ದಾರೆ. ಉಡುಪಿ ಪೇಜಾವರ ಶ್ರೀಗಳ ಸದಸ್ಯತ್ವದ ತಂಡ ಮಂಡಲ ಪೂಜೆ ನೆರವೇರಿಸಲಿದೆ.
48 ದಿನಗಳ ಕಾಲ ನಡೆಯಲಿರುವ ಮಂಡಲ ಪೂಜೆಯಲ್ಲಿ 9 ನವಗ್ರಹಗಳು, 12 ರಾಶಿ, 27 ನಕ್ಷತ್ರಗಳ ಜೊತೆ ಎಲ್ಲಾ ದೇವಾನು ದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ದೇವರ ಪ್ರಾಣಪ್ರತಿಷ್ಟಾಪನೆ ಆದ ಬಳಿಕ ಮಂಡಲ ಪೂಜೆ ಕಡ್ಡಾಯ. ಏಕೆಂದರೆ ಮಂಡಲ ಪೂಜೆಯಿಂದ ಶ್ರೀ ರಾಮಚಂದ್ರನಿಗೆ ವಿಶೇಷ ಶಕ್ತಿ ಬರುತ್ತೆ ಎಂಬ ಪ್ರತೀತಿ ಇದೆ.