ರಾಯಚೂರು: ಕಾಂಗ್ರೆಸ್ ನವರು ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧದ ಕಮಿಷನ್ ದಂಧೆ ಆರೋಪ ಮಾಡುವವರು ಮೊದಲು ದಾಖಲೆ ಒದಗಿಸಲಿ.ರಾಜ್ಯದ ಎಲ್ಲ ಶಾಸಕರು ಕಮೀಷನ್ ಪಡೆದಿದ್ದೇ ಆದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಕೂಡ ಸೇರಿದ್ದಾರೆ ಎಂದರ್ಥ ಎಂದು ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಅಲ್ಲ. ಅದು ಕಂದಾಯ ಇಲಾಖೆ ಸ್ಥಳ. ಈಗಾಗಲೇ ಸ್ವಾತಂತ್ರ್ಯ ದಿನಾಚರಣೆ ಅಲ್ಲಿ ಮಾಡಲಾಗಿದೆ. ಹೈಕೋರ್ಟ್ ನೀಡಿದ ಸೂಚನೆ ಮೇಲೆ ಸರ್ಕಾರ ತಿರ್ಮಾನ ಮಾಡಲಿದೆ ಎಂದರು.