ರಾಯಚೂರು: ಬರಗಾಲದ ಸಂಕಷ್ಟದ ಮಧ್ಯೆಯೂ ಭಕ್ತಿಯ ಪರಾಕಾಷ್ಠೆ ಮೆರೆದ ರೈತರೊಬ್ಬರ ಅಪರೂಪದ ಕಥೆ ರಾಯಚೂರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಗೋಮರ್ಸಿ ಗ್ರಾಮದಲ್ಲಿ ವರದಿಯಾಗಿದೆ.
ಗೋಮರ್ಸಿ ಗ್ರಾಮದ ರೈತ ಸಣ್ಣ ಕರಿಯಪ್ಪ ಎಂಬವರೇ ಜೋಳ ಮಾರಿ ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ.
ಸಣ್ಣ ಕರಿಯಪ್ಪ ಅವರು ಮೂರು ಎಕರೆಯಲ್ಲಿ ಪ್ರತಿ ವರ್ಷ 120 ಚೀಲ ಜೋಳ ಬೆಳೆಯುತ್ತಿದ್ದರು. ಆದರೆ, ಈ ಬಾರಿ ಬರದಿಂದಾಗಿ ಕೇವಲ 80 ಚೀಲ ಜೋಳ ಬೆಳೆದಿದ್ದರು. ಅದರಲ್ಲಿ 50 ಚೀಲ ಮಾರಾಟ ಮಾಡಿ ದೇಣಿಗೆ ನೀಡಿದ್ದಾರೆ.
50 ಚೀಲ ಜೋಳ ಮಾರಾಟ ಮಾಡಿದ ಸಣ್ಣ ಕರಿಯಪ್ಪ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ 91,870 ರೂ. ಜಮೆ ಮಾಡಿದ್ದಾರೆ. ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.
ಇವರ ಭಕ್ತಿ ಸೇವೆಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.