News Karnataka Kannada
Tuesday, April 30 2024
ರಾಯಚೂರು

ಯುವಕನ ಕೈಯಲ್ಲಿ ಮಗು ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆ

Untitled 1
Photo Credit :

 ರಾಯಚೂರು : ಶೌಚಾಯಲಯಕ್ಕೆ ಹೋಗಿ ಬರ್ತಿನಿ ಇಟ್ಕೊಳಿ ಅಂತ ಹೇಳಿ ಅಪರಿಚಿತ ಮಹಿಳೆ 9 ತಿಂಗಳ ಹಸುಗೂಸನ್ನು ಯುವಕನೊಬ್ಬನ ಕೈಗೆ ಕೊಟ್ಟು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಮೈಸೂರು ಮೂಲದ ಯುವಕ ಕೆಲಸದ ಮೇಲೆ ರಾಯಚೂರಿಗೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ಯುವಕ ಕರೆತಂದ ಮಗುವನ್ನು ಲಷ್ಕರ್ ಠಾಣೆ ಪೊಲೀಸರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದರು. ಈ ಮಧ್ಯೆ ಮೈಸೂರಿಗೆ ಹಿಂದಿರುಗಲು ರಘು ರಾಯಚೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಬಂದ ಅಪರಿಚಿತ ಮಹಿಳೆ ಮಗುವನ್ನ ಕೊಟ್ಟು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ.

ಮಗು ಕೊಟ್ಟ ಮಹಿಳೆ 2-3 ಗಂಟೆಯಾದ್ರೂ ವಾಪಸ್ ಬಾರದ ಹಿನ್ನೆಲೆ. ತನ್ನ ಬಸ್ ಬಂದ ಕಾರಣ ರಘು ಅವರು ಮಗು ಸಮೇತ ಮೈಸೂರಿಗೆ ಆಗಮಿಸಿದ್ದು, ಬಸ್ ನಿಂದ ಇಳಿದ ರಘು ಅವರು ಲಷ್ಕರ್ ಪೊಲೀಸರ ಮೊರೆ ಹೋಗಿದ್ದರು. ನಂತರ ಈ ಬಗ್ಗೆ ರಾಯಚೂರಿನ ಬಸ್ ಸ್ಟ್ಯಾಂಡ್ ವ್ಯಾಪ್ತಿಯ ಪೊಲೀಸರನ್ನ ಲಷ್ಕರ್ ಠಾಣಾ ಪೊಲೀಸರು ಸಂಪರ್ಕಿಸಿದ್ದು, ಮಹಿಳೆ ಮಾಹಿತಿ ಲಭ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಲಷ್ಕರ್ ಠಾಣೆ ಪೊಲೀಸರು ಕಂದನನ್ನ ರಕ್ಷಿಸಿ ಮಾನವೀಯತೆ ಮೆರೆದಿದ್ದು ಇದೀಗ ಮಗು ಬಾಲಮಂದಿರದ ವಶಕ್ಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು