ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಮಂಗಳೂರಿನ ವೈದ್ಯರು ಪ್ರಾರಂಭಿಸಿದ ಪೈಲೆಟ್ ಯೋಜನೆಯು ತೀವ್ರ ಅಪೌಷ್ಟಿಕತೆ ಮತ್ತು ಮಧ್ಯಮ ಅಪೌಷ್ಟಿಕತೆ ಅನ್ನು ಶೂನ್ಯಕ್ಕೆ ತರಬಹುದು ಎಂದು ತೋರಿಸಿದೆ. ಈ ಯೋಜನೆಯನ್ನು ಸೆಂಟರ್ ಫಾರ್ ಹೆಲ್ತ್ ಅಂಡ್ ಡೆವಲಪ್ಮೆಂಟ್ (ಸಿಎಚ್ಡಿ) ಗುಂಪಿನ ಘಟಕವಾದ ಎಡ್ವರ್ಡ್ ಆ್ಯಂಡ್ ಸಿಂಥಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಇಸಿಐಪಿಎಚ್) ಪರಿಚಯಿಸಿದೆ.
ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಬಲದೊಂದಿಗೆ ಈ ಯೋಜನೆಯನ್ನು ಸಿಎಚ್ಡಿ ಗ್ರೂಪ್ ತಂಡವು ಜಾರಿಗೆ ತಂದಿದೆ. ಈ ಬಗ್ಗೆ ಮಾತನಾಡಿದ ಇಸಿಐಪಿಎಚ್ ನಿರ್ದೇಶಕ ಡಾ.ಎಡ್ಮಂಡ್ ಫರ್ನಾಂಡಿಸ್, ಆಗಸ್ಟ್ 2022 ರಲ್ಲಿ ಇದ್ದ 31 ಎಸ್ಎಎಂ ಮಕ್ಕಳ ಸಂಖ್ಯೆ 2023 ರ ಮಾರ್ಚ್ ವೇಳೆಗೆ 11ಕ್ಕೆ ಇಳಿಕೆಯಾಗಿದೆ. ಅಂತೆಯೇ, 2022 ರ ಸೆಪ್ಟೆಂಬರ್ನಲ್ಲಿದ್ದ 1067 ಎಂಎಎಂ ಮಕ್ಕಳ ಸಂಖ್ಯೆ 2023ರ ಮಾರ್ಚ್ ವೇಳೆಗೆ 329ಕ್ಕೆ ಇಳಿದಿದೆ ಎಂದರು.
ಯಲಬುರ್ಗಾ ತಾಲ್ಲೂಕಿನ ಎಲ್ಲ ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಡಲೆಕಾಯಿ ಚಿಕ್ಕಿಯಿಂದ ಹಿಡಿದು ಬೇಳೆ ಪಾಯಸ, ನಿಂಬೆ ಅನ್ನ, ಅನ್ನ ಸಾಂಬಾರ್, ಮೊಳಕೆಯೊಡೆದ ಹೆಸರು ಕಾಳು, ಗೋಧಿ ಪಾಯಸ, ಉಪ್ಪಿನಕಾಯಿ ಮತ್ತು ಇತರ ಪೌಷ್ಟಿಕ ಆಹಾರವನ್ನು ನೀಡಲಾಯಿತು.
ಪೈಲೆಟ್ ಯೋಜನೆಯ ಮಾದರಿಯನ್ನು ಈಗ ಪರೀಕ್ಷಿಸಲಾಗಿದೆ. ಪ್ರಾಯೋಗಿಕವಾಗಿ ಮತ್ತು ಉನ್ನತ ಸಾಮರ್ಥ್ಯದೊಂದಿಗೆ ಅದ್ಭುತ ಫಲಿತಾಂಶಗಳನ್ನು ನೀಡಿದೆ.