News Karnataka Kannada
Monday, April 29 2024
ಕೊಪ್ಪಳ

ಕೊಪ್ಪಳ: ಕಾರು-ಟ್ರಾಕ್ಟರ್ ನಡುವೆ ಡಿಕ್ಕಿ, ಓರ್ವ ಸಾವು

Rickshaw driver injured in series of accidents in Daregudde
Photo Credit : Pixabay

ಕೊಪ್ಪಳ: ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಮತ್ತು ಪ್ರಗತಿ ನಗರ ನಡುವಿನ ಹಳ್ಳದ ಬಳಿ ನ.30ರ ಬುಧವಾರ ಬೆಳಗ್ಗೆ 5.30ಕ್ಕೆ ನಡೆದ ಈ ಘಟನೆ ಶ್ರೀರಾಮನಗರದ ದುರ್ಗಾ ಸ್ವೀಟ್ ಶಾಪ್ ಮಾಲೀಕ ನಾಗೇಶ್ ರಾವ್ (46) ಮೃತ ದುರ್ದೈವಿ.

ವಿದ್ಯಾನಗರದ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತವನ್ನು ತೆಗೆದುಕೊಳ್ಳಲು ಹಿರಿಯ ಸ್ವಾಮಿಗಳೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ವಾಹನ ಚಲಾಯಿಸುತ್ತಿದ್ದ ನಾಗೇಶ್ ರಾವ್ ಸ್ಥಳದಲ್ಲೇ ಮೃತಪಟ್ಟರೆ, ಅಂಜೂರಿ ಕ್ಯಾಂಪ್ ನ ಶೇಷಾದ್ರಿ ರಾವ್ ಮತ್ತು ಸುರೇಶ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು