News Karnataka Kannada
Tuesday, April 30 2024
ಕೊಪ್ಪಳ

ಮಸೀದಿಗೆ ಮಂಗಳಾರತಿ ಮಾಡಿದ ಐವರ ವಿರುದ್ಧ ದೂರು ದಾಖಲು

Complaint lodged against five people for performing mangalaaarti at mosque
Photo Credit : News Kannada

ಕೊಪ್ಪಳ: ಮಸೀದಿಗೆ ಮಂಗಳಾರತಿ ಮಾಡಿರುವ ಆರೋಪದಲ್ಲಿ ಐವರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಂಗಾವತಿಯಲ್ಲಿ ಸೆ. 28 ರಂದು ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಮಂಗಳಾರತಿ ಮಾಡಿದ್ದ ಐವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಗಲಭೆ ಸೃಷ್ಟಿಸುವ ಹುನ್ನಾರ ಆರೋಪದಲ್ಲಿ ಶ್ರೀಕಾಂತ ಹೊಸಕೇರಿ, ಕುಮಾರ ಹೂಗಾರ, ಚನ್ನಬಸವ, ಸಂಗಮೇಶ ಅಯೋಧ್ಯೆ, ಯಮನೂರು ರಾಠೋಡ ಎಂಬುವವರ ವಿರುದ್ಧ ಸೆಪ್ಟೆಂಬರ್ 30ರಂದು ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿ ಬಳಿ ಬರುತ್ತಿದ್ದಂತೆಯೇ ಬಾಗಿಲಿಗೆ ಆರತಿ ಬೆಳಗಿದ್ದಾರೆ. ಗಲಭೆ ಮಾಡುವ ಉದ್ದೇಶದಿಂದ ಜೈ ಶ್ರೀರಾಮ್‌, ಭಾರತ ಮಾತಾಕೀ ಜೈ, ಗವಿ ಗಂಗಾಧರೇಶ್ವರ ಮಹಾರಾಜ್‌ ಕೀ ಜೈ ಎಂದು ಷೋಷಣೆಗಳನ್ನು ಕೂಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು