ಆಳಂದ: ಲಾರಿ ಹಾಗೂ ಗೂಡ್ಸ್ ವಾಹನದ ಮಧ್ಯ ಡಿಕ್ಕಿ ಸಂಭವಿಸಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕಡಗಂಚಿ ಸಮೀಪದ ಕಲಬುರಗಿ-ಆಳಂದ ರಾಜ್ಯ ಹೆದ್ದಾರಿ ಮೇಲೆ ಬುಧವಾರ ಸಂಭವಿಸಿದೆ.
ಗೂಡ್ಸ್ ವಾಹನದಲ್ಲಿದ್ದ ಉತ್ತರ ಪ್ರದೇಶದ ಶಿವಚರಣ (27) ಹಾಗೂ ಆಳಂದ ಪಟ್ಟಣದ ಸುಲ್ತಾನಪುರ ಗಲ್ಲಿ ನಿವಾಸಿ ಮೋಹನ ಅಪ್ಪಶಾ ಕೊಡಗುಳೆ(38) ಮೃತರು. ಪ್ರಯಾಣಿಕ ಜಮೀರ್ ಗಂಭೀರ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.