News Karnataka Kannada
Monday, April 29 2024
ಕಲಬುರಗಿ

ಸೇವೆ ಕಾಯಂಗೆ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಧರಣಿ

Guest lecturers stage dharna demanding regularisation of services
Photo Credit : News Kannada

ಕಲಬುರಗಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಮಾಧ್ಯಮ ಪ್ರತಿನಿಧಿ ಶರಣಬಸಪ್ಪ ಮೈಸಲಗಿ, ‘ಸುಮಾರು 15 ವರ್ಷಗಳಿಂದ ನಾವು ಅತಿಥಿ ಉಪನ್ಯಾಸಕರಾಗಿಯೇ ಸೇವೆ ಸಲ್ಲಿಸುತ್ತಿದ್ದೇವೆ.

ಜಿಲ್ಲೆಯಲ್ಲಿ ಸುಮಾರು 350 ಅತಿಥಿ ಉಪನ್ಯಾಸಕರಿದ್ದೇವೆ. ರಾಜ್ಯದಾದ್ಯಂತ 11 ಸಾವಿರ ಇದ್ದೇವೆ. ನಮಗೆ ಕನಿಷ್ಠ ಸೇವಾ ಭದ್ರತೆಯೂ ಇಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮುಂದುವರಿಯಲಿದೆ’ ಎಂದು ಮಾಹಿತಿ ನೀಡಿದರು.

ಅತಿಥಿ ಉಪನ್ಯಾಸಕಿ ನಾಗವೇಣಿ ಹಿರೇಮಠ ಮಾತನಾಡಿ, ‘ಕೆಟಗರಿ ಆಧಾರದಲ್ಲಿ ಎಂ.ಎ ಮುಗಿದವರಿಗೆ ₹ 26 ಸಾವಿರ, ಎಂ.ಫಿಲ್‌ ಮುಗಿದವರಿಗೆ ₹ 28, ಪಿಎಚ್‌.ಡಿ ಮುಗಿದವರಿಗೆ ₹ 30 ಸಾವಿರ ಎಂದು ಸಂಬಳ ನಿಗದಿ ಮಾಡಿದ್ದಾರೆ. ಆದರೆ ತರಗತಿಗಳನ್ನು ಹೆಚ್ಚಿಸಿದ್ದಾರೆ. ಅಕ್ಟೋಬರ್‌ ತಿಂಗಳಿನಿಂದ ಸಂಬಳವಾಗಿಲ್ಲ, ನಮಗೂ ಆರೋಗ್ಯ ಸಮಸ್ಯೆಗಳು ಇವೆ. ನಮ್ಮ ಎಲ್ಲಾ ಸಮಸ್ಯೆಗಳಿಗೆ ಸೇವೆ ಕಾಯಮಾತಿಯೇ ಪರಿಹಾರ’ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು