News Karnataka Kannada
Wednesday, May 01 2024
ಕಲಬುರಗಿ

ರಾಜ್ಯದ ಮುಖ್ಯಮಂತ್ರಿಯಾಗಿ ದತ್ತಾತ್ರೇಯ ದರ್ಶನಕ್ಕೆ‌ ಬರುವೆ ಎಂದ ಡಿಕೆಸಿ

ತಾವೆಲ್ಲಾ ಅರ್ಚಕರು ನಾನು ಮುಖ್ಯಮಂತ್ರಿ ಆಗಿ ಬರಬೇಕೆಂದು ಆಶೀರ್ವಾದ ನೀಡಿ ಸನ್ಮಾನ ಮಾಡಿದ್ದೀರಿ.ಅದಕ್ಕೆ ದತ್ತಾತ್ರೇಯ ಮಹಾರಾಜರ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ ಮತ್ತೊಮ್ಮೆ ದೇವಸ್ಥಾನಕ್ಕೆ ಬರುತ್ತೇನೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Photo Credit : NewsKarnataka

ಕಲಬುರಗಿ: ಈ ಭಾಗದಲ್ಲಿ ದೇವಲ ಗಾಣಗಾಪುರ ದತ್ತ ಮಹಾರಾಜರ ದೇವಸ್ಥಾನ ಪವಿತ್ರವಾಗಿದ್ದು, ಅಪಾರ ಭಕ್ತರನ್ನು ಹೊಂದಿದ್ದಾರೆ. ಅದಕ್ಕಾಗಿ ಈ ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಗುವುದು, ತಾವೆಲ್ಲಾ ಅರ್ಚಕರು ನಾನು ಮುಖ್ಯಮಂತ್ರಿ ಆಗಿ ಬರಬೇಕೆಂದು ಆಶೀರ್ವಾದ ನೀಡಿ ಸನ್ಮಾನ ಮಾಡಿದ್ದೀರಿ. ಅದಕ್ಕೆ ದತ್ತಾತ್ರೇಯ ಮಹಾರಾಜರ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ ಮತ್ತೊಮ್ಮೆ ದೇವಸ್ಥಾನಕ್ಕೆ ಬರುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರನ್ನು ಸನ್ಮಾನಿಸಿದ ಅರ್ಚಕರು ಮತ್ತೊಮ್ಮೆ ದೇವಲ ಗಾಣಗಾಪುರಕ್ಕೆ ಮುಖ್ಯಮಂತ್ರಿಯಾಗಿ ಬರಬೇಕು. ತಮಗೆ ದತ್ತಾತ್ರೇಯ ಮಹಾರಾಜರ ಆಶೀರ್ವಾದವಿದೆ ಎಂದರು.

ಪೂಜಾ ಕೈಂಕರ್ಯವನ್ನು ಅರ್ಚಕರಾದ ಉದಯ ಭಟ್ ಪೂಜಾರಿ, ಪ್ರಸನ್ನ ಪಿ. ಪೂಜಾರಿ, ಗಂಗಾಧರ್ ಎಸ್.ಪೂಜಾರಿ, ಪ್ರಫುಲ್ ಪಿ.ಪೂಜಾರಿ, ದೇವಿದಾಸ್ ಎ.ಪೂಜಾರಿ ನೆರವೇರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು