News Karnataka Kannada
Monday, April 29 2024
ಕಲಬುರಗಿ

ಕಲಬುರಗಿ ಜಿಲ್ಲಾಧಿಕಾರಿ ಕಾರಿನ ಜಪ್ತಿಗೆ ಕೋರ್ಟ್ ಆದೇಶ

Kaluburgi Dc
Photo Credit :

 ಕಲಬುರಗಿ: ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರ ಸರಕಾರಿ ಕಾರು ಜಪ್ತಿ ಮಾಡುವ ಆದೇಶವನ್ನು ಕೋಟ ನೀಡಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಲ್ಲಪ್ಪ ಮೇತ್ರೆ ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ.

ಭೀಮಾ ಎತ ನೀರಾವರಿ ಯೋಜನೆಯಡಿ ಕಲ್ಲಪ್ಪ ಮೇತ್ರೆ ಎಂಬುವವರ 33 ಗುಂಟೆ ಜಮೀನು 2008ರಲ್ಲಿ ಮುಳುಗಡೆಯಾಗಿತ್ತು. 7.39.632 ಪರಿಹಾರ ನೀಡುವಂತೆ ಕೋಟ೯ ಆದೇಶ ಆಗಿತ್ತ. ಆದರೆ ಇಲ್ಲಿಯವರೆಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಾರು ಜಪ್ತಿಗೆ ಕೋಟ೯ ಆದೇಶ ನೀಡಿದೆ.

ಇನ್ನೂ ಕೋಟ೯ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಸರಕಾರಿ ಕಾರಿನ ಜಪ್ತಿಗೆ ಕೋಟ೯ ಸಿಬ್ಬಂದಿ ಮತ್ತು ವಕೀಲರು ಬಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು