ಬೀದರ್: ಬೀದರ್ ಜಿಲ್ಲಾ ಮಾದಿಗ ಸಮಾಜದ ಮುಖಂಡ ಸ್ವಾಮಿದಾಸ ಕೆಂಪೆನೋರ್ ಇಂದು ಬೆಂಬಲಿಗರೊಂದಿಗೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ರಾಜ್ಯ ಭಾಜಪಾ ಪ್ರಧಾನಕಾರ್ಯದರ್ಶಿ ಮಾಜಿ ಶಾಸಕರಾದ ಪಿ.ರಾಜು ಹಾಗೂ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಹುಡಗಿ ಅವರ ನೇತೃತ್ವದಲ್ಲಿ ಬಿಜೆಪಿಯ ತತ್ವ ಸಿದ್ಧಾಂತವನ್ನು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವವನ್ನು ಮೆಚ್ಚಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.
ಇವರ ಜೊತೆಯಲ್ಲಿ ಕಮಲಹಾಸನ ಭಾವಿದೊಡ್ಡಿ ಔರಾದ(ಬಿ), ಶಿವರಾಜ ಹಮಿಲಪೂರ ಬೀದರ ಉತ್ತರ, ಡಾ.ಜೇಮ್ಸ್ ಬೀದರ ಉತ್ತರ, ವಿಲ್ಸನ್ ಇಸ್ಲಾಂಪೂರ್ ಬೀದರ ಉತ್ತರ, ಕೆ.ಸುಶೀಲ ಬೀದರ ಉತ್ತರ, ಉಮೆಶ ಅಡ್ಡೆನೂರ್ ಬೀದರ ಉತ್ತರ, ವಿಲ್ಸನ್ ಗುಮ್ಮೆ, ವಿಲ್ಸನ ಕರಕನಳ್ಳಿ, ಶಿವಕುಮಾರ ಚಟ್ನಾಳ(ಔರಾದ ಬಿ), ಅಮೃತ ಚೆಟ್ನಾಳ್ (ಔರಾದಬಿ) ಬಿಜೆಪಿಯಲ್ಲಿ ಸೇರ್ಪಡೆಯಾದರು.
ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಇಂದು ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ರಾಜ್ಯ ಸಂಚಾಲಕರನ್ನಾಗಿ ನಿಯುಕ್ತಿಗೊಂಡ ರಾಜಶೇಖರ ನಾಗಮೂರ್ತಿ ಹಾಗೂ ಭಾಲ್ಕಿ ಮಂಡಲ ಅಧ್ಯಕ್ಷರಾದ ವೀರಣ್ಣಾ ಕಾರಬಾರಿ ಅವರಿಗೆ ಸನ್ಮಾನಿಸಲಾಯಿತು.
ಇಂದು ನಡೆದ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಲಬುರಗಿ ಜಿಲ್ಲೆಯ ಪ್ರವಾಸದ ಹಿನ್ನಲೆಯಲ್ಲಿ ಪೂರ್ವಸಿದ್ಧತೆಗಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಕಿರಣ ಪಾಟೀಲ, ಮಾಧವರಾವ ಹೂಸೂರೆ, ಶಾಸಕರಾದ ಡಾ. ಸಿದ್ದು ಪಾಟೀಲ, ಶರಣು ಸಲಗಾರ, ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಪ್ರಕಾಶ ಖಂಡ್ರೆ, ಮಾಜಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ, ಲೋಕಸಭಾ ಚುನಾವಣಾ ಸಂಚಾಲಕರಾದ ಅರಹಂತ ಸಾವಳೆ, ಬೀದರ ನಗರ ಘಟಕದ ಅಧ್ಯಕ್ಷರಾದ ಶಶಿಕುಮಾರ ಹೊಸಳ್ಳಿ, ಗ್ರಾಮಾಂತರ ಘಟಕದ ಅಧ್ಯಕ್ಷರಾದ ರಾಜೇಂದ್ರಕುಮಾರ ಪೂಜಾರಿ, ರಾಜ್ಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾದ ರೋಫೋದ್ದೀನ್ ಕಚೇರಿವಾಲಾ, ರಾಷ್ಟ್ರೀಕಾಯ ಪರಿಶಿಷ್ಟ ಪಂಗಡ ಘಟಕದ ಪ್ರಧಾನ ಕಾರ್ಯದರ್ಶಿಯಾದ ಜೈಕುಮಾರ ಕಾಂಗೆ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.