News Karnataka Kannada
Tuesday, April 30 2024
ಬೀದರ್

5 ಕೋಟಿ ಸಸಿ ನೆಡುವ ಸಚಿವ ಖಂಡ್ರೆ ಕಾರ್ಯಕ್ಕೆ ರೂರಲ್, ಅರ್ಬನ್ ಡೆವಲಪ್‌ಮೆಂಟ್‌ ಸಂಸ್ಥೆ ಸಾಥ್

Rural, Urban Development Agency to support Minister Khandre's efforts to plant 5 crore saplings
Photo Credit : News Kannada

ಬೀದರ್: ಪ್ರತಿ ವರ್ಷ ರಾಜ್ಯಾದ್ಯಂತ 5 ಕೋಟಿ ಸಸಿ ನೆಡುವ ಗುರಿ ಹೊಂದಿರುವ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರ ಯೋಜನೆಗೆ ಸಾಥ್ ನೀಡಿರುವ ಬಸವಕಲ್ಯಾಣದ ಕರ್ನಾಟಕ ರೂರಲ್ & ಅರ್ಬನ್ ಡೆವಲಪ್‌ಮೆಂಟ್‌ ಸಂಸ್ಥೆ ತಾಲೂಕಿನ 15 ಪಂಚಾಯತಿಗೆ 100 ಸಸಿಗಳನ್ನ ನೀಡಿ, ಅವುಗಳ ಪಾಲನೆ ಪೋಷಣೆಗೆ ಮುಂದಾಗಿದೆ.

ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿ ಪ್ರಾಥಮಿಕವಾಗಿ ನಾರಾಯಣಪುರ ಪಂಚಾಯತಿಗೆ 100 ಗಿಡಗಳನ್ನ ನೀಡಿದರು. ಬಳಿಕ ಶಾಲೆಯ ಮಕ್ಕಳಿಗೂ ಸಸಿಗಳನ್ನ ನೀಡಿ ಪರಿಸರ ಬೆಳೆಸುವ ಮಾಹಿತಿ ನೀಡಿದರು.

ಈ ಕುರಿತು ಸಂಸ್ಥೆಯ ಮುಖ್ಯಸ್ಥ ಕರಬಸಯ್ಯ ಮಠಪತಿ ಮಾತನಾಡಿ, ಇತ್ತೀಚಿನ‌ ದಿನಗಳಲ್ಲಿ ಪರಿಸರದ ನಾಶ ಹೆಚ್ಚಾಗಿದ್ದು, ಪರಿಸರ ಬೆಳೆಸುವುದು ಅವಶ್ಯಕವಾಗಿದೆ. ಜಿಲ್ಲೆಯವರೆ ಆದ ಸಚಿವ ಈಶ್ವರ ಖಂಡ್ರೆ ಅವರ ಸಸಿ ಬೆಳೆಸುವ ಯೋಜನೆ ಉತ್ತಮವಾಗಿದೆ. ಹಾಗಾಗಿ ನಾವು ಕೂಡ ಅವರ ಯೋಜನೆಗೆ ಸಾಥ್ ನೀಡಿದ್ದು, ಪ್ರತಿ ಪಂಚಾಯತಿಗಳಿಗೆ ನೂರು ಸಸಿಗಳನ್ನ ನೀಡಿ, ಅವುಗಳ ನೆಡುವ ಮೂಲಕ ಅವುಗಳ ಪಾಲನೇ ಪೋಷಣೆಯನ್ನ‌ ಮಾಡ್ತೆವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು