ಚಿಟಗುಪ್ಪ:ಚಿಟಗುಪ್ಪ ಪಟ್ಟಣ, ತಾಲ್ಲೂಕಿನೆಲ್ಲೆಡೆ ಭಾನುವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ.
ಗಾಳಿ ಮಳೆಯಿಂದಾಗಿ ವಿವಿಧೆಡೆ ಮನೆಗಳ ಮೇಲಿನ ತಗಡಗಳು ಬಹುದೂರದ ವರೆಗೂ ಹಾರಿಬಿದ್ದಿವೆ. ತಾಲ್ಲೂಖಿನ ನಿರ್ಣಾ, ಮುತ್ತಂಗಿ, ಮನ್ನಾಎಖ್ಖೇಳಿ, ಮೀನಕೇರಾ, ಚಾಂಗಲೇರಾ ಗ್ರಾಮಗಳಲ್ಲಿ ಸಂಜೆ ಅರ್ಧ ಗಂಟೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಗುಡುಗು ಮಿಂಚು ಜನರನ್ನು ಬೆಚ್ಚಿ ಬೀಳುವಂತೆ ಮಾಡಿತು. ಮಿಂಚಿನಿಂದ ಹಲವು ಮನೆಗಳಲ್ಲಿ ವಿದ್ಯುತ್ ಉಪಕರಣಗಳು, ಟಿವಿ ಹಾನಿಗೊಳಗಾಗಿವೆ. ಸುಮಾರು ಅರ್ಧ ಗಂಟೆ ಕಾಲ ಬಿದ್ದ ಮಳೆಯಿಂದ ತಾಪಮಾನ ಕಡಿಮೆಯಾಯಿತು.
ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದ ಚಂದ್ರಮ್ಮ ಲೇಔಟ್ನ ರಸ್ತೆ ಪಕ್ಕದಲ್ಲಿಯ ಪವನಕುಮಾರ ಎಂಬುವರ ಟೀ ಸ್ಟಾಲ್ ಬಿರುಗಾಳಿಗೆ ಉರುಳಿಬಿದ್ದಿದ್ದು, ಹಾಲು, ಸಕ್ಕರೆ, ಟೀ ಪುಡಿ, ಅಲ್ಲಾ ಇತರ ಪದಾರ್ಥಗಳು ನೀರು ಪಾಲಾಗಿವೆ ಎಂದು ಸ್ಟಾಲ್ ಮಾಲೀಕ ಪವನಕುಮಾರ ತಿಳಿಸಿದ್ದಾರೆ.
ಚಾಂಗಲೇರಾ ಕ್ರಾಸ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಮರ ಉರುಳಿಬಿದ್ದಿದ್ದು, ಬೈಕ್ನ ಟ್ಯಾಂಕ್ ಒಡೆದಿದೆ. ಸ್ಥಳದಲ್ಲಿದ್ದ ನಾಗರಿಕರು ಉರುಳಿಬಿದ್ದ ಮರ ಎತ್ತಿ ಬೈಕ್ ರಕ್ಷಿಸಿದ್ದಾರೆ.
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಕ್ರಾಸ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಮರ ಉರುಳಿಬಿದ್ದಿದ್ದು ಬೈಕ್ಗೆ ಹಾನಿ ಸಂಭವಿಸಿದೆ.
ವಿಜಯಪುರ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಬೂತ್ ಗಳಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಪರ ಅಲೆ ಇದೆ…
ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪದಲ್ಲಿ ಹಣದ ಸಮೇತ ನಾಲ್ವರು ಸಿಕ್ಕಿಬಿದ್ದ ಘಟನೆ…
ಮೋದಿ ಮತ್ತವರ ಬಳಗ ಮತ್ತು ಬಿಜೆಪಿಯವರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಮಾಜಿ…
ಜನಸಾಮಾನ್ಯರಿಗೆ ಆಸರೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್…
ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣರನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು…
ಭಾರತ ಸೇರಿದಂತೆ ಹಲವು ದೇಶಗಳು ಅನ್ಯದೇಶಿಗರಿಗೆ ತೆರೆದುಕೊಂಡಿಲ್ಲ ಎಂದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ…