ಬೀದರ್: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿ.ವೈ ವಿಜಯೇಂದ್ರ ಮೊದಲ ಬಾರಿಗೆ ಬೀದರ್ಗೆ ಇಂದು (ಜ.29) ಆಗಮಿಸಿಲಿದ್ದಾರೆ. ರಸ್ತೆ ಮೂಲಕ ಕಲಬುರಗಿಯಿಂದ ಬೀದರ್ಗೆ ಆಗಮಿಸಲಿದ್ದು, ಬೂತ್ ಮಟ್ಟದ ಅಧ್ಯಕ್ಷರಾದ ಭೋವಿ ಸಮಾಜದ ಲಾಲಪ್ಪ ಮನೆಗೆ ಭೇಟಿ ನೀಡಿಲಿದ್ದಾರೆ.
ಬಳಿಕ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಚಿಟ್ಟಾವಾಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವಿಶ್ವ ಗುರು ಬಸವಣ್ಣನವರ ಪುತ್ತಳಿ ಉದ್ಘಾಟನೆಯನ್ನು ಮಾಡಲಿದ್ದಾರೆ.
12 ಗಂಟೆ ಸುಮಾರಿಗೆ ಬೀದರ್ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಇದೆ.
ನಂತರ ಗಣೇಶ್ ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ಸಮಾರಂಭದ ಸಭೆಯಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ವಿಜಯೇಂದ್ರ ಅವರಿಂದ ಜಿಲ್ಲಾಧ್ಯಕ್ಷರಿಗೆ ಅಭಿನಂದಿಸಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವಿಜಯೇಂದ್ರ ಅವರನ್ನು ಸ್ವಾಗತಿಸಲು ಬಿಜೆಪಿ ಆಕಾಂಕ್ಷಿಗಳ ಭರದಿಂದ ಸಿದ್ದತೆಯನ್ನು ನಡೆಸಿದ್ದಾರೆ.
ನಗರಾದಾದ್ಯಂತ ವಿಜಯೇಂದ್ರಗೆ ಸ್ವಾಗತ ಕೋರಿದ ಕಟೌಟ್ ಗಳು ರಾರಾಜಿಸುತ್ತಿದ್ದು, ಬಾಹುಬಲಿಯ ವೇಷದಲ್ಲಿ ಬಿ.ವೈ ವಿಜಯೇಂದ್ರ ಬ್ಯಾನರ್ ಅಳವಡಿಕೆ ಮಾಡಲಾಗಿದೆ.