ಬೀದರ್: ಬಸವಕಲ್ಯಾಣ ಶಾಸಕ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಪುತ್ರ ವಿಜಯಸಿಂಗ್ ಅವರು ನೂರಾರು ಕೋಟಿ ಹಣ ಸುರಿದರೂ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ ಎಂದು ಶರಣು ಸಲಗರ ಹೇಳಿದರು.
ನನಗೆ ಮತ ನೀಡಲು ಮುಂಬೈ, ಪುಣೆ, ಹೈದರಾಬಾದ್ನಿಂದಲೂ ಜನರು ಬಂದಿದ್ದರು. 92 ಸಾವಿರಕ್ಕೂ ಹೆಚ್ಚಿನ ಮತ ನೀಡಿ ಸಾವಿರಾರು ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಲಾಗಿದೆ ಎಂದರು.