Categories: ಬೀದರ್

ಬೀದರ್: ‘ಭಗವಂತ ಖೂಬಾರಿಂದ ನನಗೆ ಬೆದರಿಕೆ: ಪ್ರಭು  ಚವ್ಹಾಣ ಹೇಳಿಕೆ

ಬೀದರ್: ‘ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಅವರ ಬಿಜೆಪಿಯ ಬಿ ತಂಡ ಚುನಾವಣೆಯಲ್ಲಿ ನನ್ನನ್ನು ಪರಾಭವಗೊಳಿಸಲು ಪ್ರಯತ್ನಿಸಿತು’ ಎಂದು ಔರಾದ್‌ನ ಬಿಜೆಪಿಯ ವಿಜೇತ ಅಭ್ಯರ್ಥಿ ಪ್ರಭು  ಚವ್ಹಾಣ ಆರೋಪಿಸಿದರು.

‘ಖೂಬಾ ಅವರು ತಂಡಕ್ಕೆ ಹಣಕಾಸು ನೆರವು ನೀಡಿ ಪಕ್ಷ ದ್ರೋಹದ ಕೆಲಸ ಮಾಡಿದ್ದಾರೆ. ನನಗೆ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಔರಾದ್ ತಾಲ್ಲೂಕಿನಲ್ಲಿ ಸಿಪೆಟ್‍ಗೆ ಭೂಮಿ ಪೂಜೆ ನೆರವೇರಿಸಿದರೂ, ಇದುವರೆಗೆ ಕಾಮಗಾರಿ ಶುರು ಮಾಡಿಲ್ಲ’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಬೀದರ್-ಕಮಲನಗರ ಮಧ್ಯೆ ನಿರ್ಮಿಸಿರುವ ಹೆದ್ದಾರಿಯು ಮೂರೇ ವರ್ಷಗಳಲ್ಲಿ ಬಿರುಕು ಬಿಟ್ಟಿದೆ. ಖೂಬಾ ಅವಧಿಯಲ್ಲಿ ನಿರ್ಮಿಸಿದ ರಸ್ತೆ ದುರಸ್ತಿಗೆ ಬಂದಿದೆ. ಖೂಬಾ ಅವರು ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಅಡ್ಡಗಾಲು ಹಾಕಿದರು. ಅಧಿಕಾರಿಗಳ ಮೇಲೆ ಒತ್ತಡ ತಂದು ಜಲ ಜೀವನ ಮಿಷನ್ ಕಾಮಗಾರಿಗೆ ಪದೇ ಪದೇ ಟೆಂಡರ್ ಕರೆಯುವಂತೆ ಮಾಡಿದರು’ ಎಂದು ಅವರು ತಿಳಿಸಿದರು.

‘ಭಗವಂತ ಖೂಬಾ ಹಾಗೂ ಅವರ ತಂಡದಿಂದ ನನಗೆ ಜೀವ ಭಯವಿದ್ದು, ಇದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸುವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರ ಗಮನಕ್ಕೂ ತರುವೆ’ ಎಂದು ಅವರು ತಿಳಿಸಿದರು.

ಮುಖಂಡರಾದ ಶಿವಾಜಿರಾವ್ ಕಾಳೆ, ಅರಹಂತ ಸಾವಳೆ, ಕಿರಣ ಪಾಟೀಲ, ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಸುರೇಶ ಭೋಸ್ಲೆ, ರಮೇಶ ಬಿರಾದಾರ, ಗಿರಿಶ್ ಒಡೆಯರ್, ಶಿವಕುಮಾರ ಪಾಂಚಾಳ್, ನರಸಿಂಗ್ ಮೇತ್ರೆ, ರಮೇಶ ಉಪಾಸೆ, ಬಾಬುರಾವ್ ತೋರ್ಣಾವಾಡಿ ಇದ್ದರು.

ಪ್ರತಿಕ್ರಿಯೆಗಾಗಿ ಸಂಪರ್ಕಿಸಲು ಪ್ರಯತ್ನಿಸಿದರೂ ಭಗವಂತ ಖೂಬಾ ಅವರು ಲಭ್ಯವಾಗಲಿಲ್ಲ

ಚುನಾವಣೆಯಲ್ಲಿ ಸೋಲಿಸಲು ತೀವ್ರ ಪ್ರಯತ್ನ ಕೇಂದ್ರ ಸಚಿವರಿಂದ ತಂಡಕ್ಕೆ ಹಣಕಾಸು ನೆರವು: ಆಪಾದನೆ ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಅಡ್ಡಗಾಲು

Ashika S

Recent Posts

ಕುರುಬ ಸಮಾಜದ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆ ಶಿವಕುಮಾರ ನಾಟೀಕಾರಗಿಲ್ಲ

ಕುರುಬ ಸಮಾಜಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿರುವ ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರಗೆ ಕುರುಬ ಸಮಾಜದ ರಾಜಕಾರಣದ…

6 mins ago

ಕೊರೊನಾ ಸರ್ಟಿಫಿಕೇಟ್​ನಲ್ಲಿ ಪ್ರಧಾನಿ ಮೋದಿ ಫೋಟೋ ದಿಢೀರ್‌ ಮಾಯ !

ಔಷಧಿಗಳ ತಯಾರಿಕಾ Oxford-AstraZeneca ಸಂಸ್ಥೆ ಕೊರೊನಾ ಲಸಿಕೆ ಕೋವಿಶೀಲ್ಡ್ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಕೋರ್ಟ್​ ಮುಂದೆ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ…

17 mins ago

ಬೇಸಿಗೆಯಲ್ಲಿ ದಾಳಿಂಬೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆಯಲ್ಲಿ ದಾಳಿಂಬೆ ಹಣ್ಣನ್ನು ಹೆಚ್ಚು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಇದು ನಮ್ಮ ಆರೋಗ್ಯಕ್ಕೆ ಪೋಷಕ ಶಕ್ತಿಯನ್ನು ನೀಡುವುದರಿಂದ…

25 mins ago

ನ್ಯೂಸ್ ಕರ್ನಾಟಕ ವರದಿಯ ಫಲಶೃತಿ: ವಿಶೇಷ ಚೇತನ ರಾಜಶೇಖರ ಮೂರ್ತಿ ಮನೆಗೆ ಅಧಿಕಾರಿಗಳ ಭೇಟಿ

ಸರ್ಕಾರದ ಪಿಂಚಣಿ ನಂಬಿ ದಿಕ್ಕೆಟ್ಟ ವಿಶೇಷ ಚೇತನ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯ ವರದಿ ಮಾಡಿದ…

38 mins ago

‘ಹರಿ ಹರ ವೀರ ಮಲ್ಲು’ ಚಿತ್ರದ ಟೀಸರ್‌ ನಲ್ಲಿ ಅಬ್ಬರಿಸಿದ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ನಟನೆಯ 'ಹರಿ ಹರ ವೀರ ಮಲ್ಲು ಭಾಗ 1ʼಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ.

50 mins ago

ಪ್ರಜ್ವಲ್ ಅಶ್ಲೀಲ ವಿಡಿಯೋ ಮೊದಲು ವಾಟ್ಸ್‌ಆ್ಯಪ್‌ಗೆ ಹಾಕಿದ ಸ್ಫೋಟಕ ಮಾಹಿತಿ ಬಹಿರಂಗ

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಇಡೀ ರಾಜ್ಯ, ದೇಶಾದ್ಯಂತ ಸುದ್ದಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾದ…

1 hour ago