ಬೀದರ್: ಬರಿದಾಬಾದ್ ಗ್ರಾಮದ ಪ್ರಮುಖರು ಕಾಂಗ್ರೆಸ್ ಜೇಡಿಎಸ್ ತೊರೆದು ಅನೇಕ ಜನ ಗೋಪಾಲ್ ಲದ್ದೇಕರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಪಕ್ಷದ ಸಿದ್ಧಾಂತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಡಾ ಶೈಲೇಂದ್ರ ಬೆಲ್ದಾಳೆ ರವರ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡರು. ಎಲ್ಲರನ್ನೂ ಡಾ ಶೈಲೇಂದ್ರ ಬೆಲ್ದಾಳೆ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಸೇರ್ಪಡೆಯಾದವರು ಲೋಕೇಶ್ ಲದ್ದೇಕರ್,ಶಿವಾ ರೆಡ್ಡಿ,ಅನೀಲ ಪಾಟೀಲ್, ಅಭಿಷೇಕ ಪಾಟೀಲ್ , ಸಿದ್ರಾಮ ಲದ್ದೇಕರ್ ಹಣಮಂತ, ಶ್ರೀನಿವಾಸ, ಲೋಕೇಶ್,ಅಂಕುಶ್, ಅಶೋಕ್ ಮೇತ್ರೆ,ಅಮರ್ ಲದ್ದೇಕರ್, ಯಲ್ಲಾಲಿಂಗ, ಉಮೇಶ್ ರೆಡ್ಡಿ, ಬಲವಂತ ರೆಡ್ಡಿ, ಅರುಣಕುಮಾರ, ವಿನೋದ್ ಕುಮಾರ್, ಮಹೇಶ್ ಕೋಲಿ, ಸುಭಾಷ್ ಲದ್ದೇಕರ್, ಶ್ರೀಕಾಂತ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ ಸ್ವಾಮಿ, ಚೆನ್ನಪ್ಪ ಗೌರಶೆಟ್ಟಿ,ಘಾಳೆಪ್ಪ ಚಟ್ನಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.