ಔರಾದ: ದುಡಿಮೆಯೇ ದೇವರೆಂದು ಭಾವಿಸಿ, ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರ ತ್ಯಾಗ ಗೌರವಕ್ಕೆ ಅರ್ಹವಾಗಿದೆ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.
ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರಿಂದಲೇ ದೇಶ ಸ್ವಚ್ಛ, ಸುಂದರ, ಸುರಕ್ಷಿತ ಮತ್ತು ಕಾರ್ಮಿಕರಿಲ್ಲದೇ ದೇಶದ ಪ್ರಗತಿ ಇಲ್ಲ. ಮಾಲೀಕನ ಮಟ್ಟಕ್ಕೆ ಬೆಳೆಸಿದವರು ನಾನು ಬೆಳೆಯದಿದ್ದರೂ ತನ್ನ ಯಜಮಾನ ಬೆಳೆಯಲಿ ಎಂಬುವರೇ ಕಾರ್ಮಿಕರು ಎಂದ ಅವರು 12ನೇ ಶತಮಾನದ ಬಸವಾದಿ ಶರಣರು ಕಾಯಕವೇ ಕೈಲಾಸಕ್ಕೆ ಮಹತ್ವ ನೀಡಿ ಕೊಟ್ಟ ಕೊಡುಗೆ ಇಂದು ನಮಗೆ ಕಾರ್ಯನಿರತರಾಗಲು ಸಾಧ್ಯವಾಗಿದೆ. ಕೋವಿಡ್-19 ನಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರ ಶ್ರಮ ಎಂದೆಂದಿಗೂ ಮರೆಯಲಾಗದು ಎಂದರು.
ಶಾಲಾ ಕಾಲೇಜಿನ ಡ್ರೈವರ್ ಕಾರ್ಮಿಕರುಗಳಾದ ಚೆನ್ನಪ್ಪ ವಾಲ್ದೊಡ್ಡೆ, ಸಂಗಯ್ಯ ಸ್ವಾಮಿ, ಸಂಗಶೆಟ್ಟಿ ಗಂದಿಗುಡೆ, ಶಿವಶಂಕರ್ ಸಾವಳೆ, ಸೋಮನಾಥ್ ಬಿರಾದರ್. ಸ್ವಚ್ಛತಾ ಕಾರ್ಮಿಕರುಗಳಾದ ಅಂಬಾಬಾಯಿ ಟೆಳೇಕರ್, ಶಿವಮಂಗಲಾ ಲಕ್ಕೆ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಸುರೇಖಾ ದಡ್ಡೆ ಇತರರಿದ್ದರು.
ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.
ಹಾಸನ ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಿತೂರಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…
ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್ ಅನುಮತಿ ಮೇರೆಗೆ ಮಂಗಳವಾರ…
ದೇಶದಾದ್ಯಂತ ಮೂರನೇ ಹಂತದ ಮತದಾನ ಮುಕ್ತಾಯವಾಗಿದೆ. ಬೆಳಗ್ಗ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಿತು. ಸಣ್ಣಪುಟ್ಟ ಗಲಾಟೆಗಳನ್ನು…
ಮುಸ್ಲಿಂ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕರ್ನಾಟಕ ಘಟಕ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋವನ್ನು 'ತಕ್ಷಣ' ತೆಗೆದುಹಾಕುವಂತೆ…