ಬಳ್ಳಾರಿ: 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಆರ್ಟಿಒ ಅಧಿಕಾರಿಯೊಬ್ಬರು ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆರ್ಟಿಒ ಅಧಿಕಾರಿ ಚಂದ್ರಕಾಂತ್ ಗುಡಿಮನಿ ಹಾಗೂ ಏಜೆಂಟ್ ಮಹಮ್ಮದ್ ರಾಜ್ ಸದ್ಯ ಲೋಕಾಯುಕ್ತ ವಶದಲ್ಲಿದ್ದಾರೆ. ಬಳ್ಳಾರಿಯ ಉಮೇಶ್ ಎನ್ನುವರು ಸಿಸಿ ಪ್ರಮಾಣ ಪತ್ರ ಕೊಡುವಂತೆ ಕೇಳಿದ್ದರು.
ಇದಕ್ಕೆ ಭ್ರಷ್ಟಾಧಿಕಾರಿ 15 ಸಾವಿರ ರೂಪಾಯಿ ಲಂಚ ಕೊಡುವಂತೆ ಕೇಳಿದ್ದಾರೆ. ಇದರಿಂದ ಉಮೇಶ್ ಅವರು ಪೋಲ್ ಕಾಲ್ ಆಡಿಯೋ ಸಮೇತ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿ ಚಂದ್ರಕಾಂತ್ ಮತ್ತು ಏಜೆಂಟ್ ಮಹಮ್ಮದ್ ರಾಜ್ ಲಂಚ ಪಡೆಯುತ್ತಿದ್ದರು.
ದೂರಿನ ಆಧಾರದ ಮೇಲೆ ಲೋಕಯುಕ್ತ ಎಸ್ ಪಿ ಶಶಿಧರ್ ನೇತೃತ್ವದ ತಂಡ ಟ್ರ್ಯಾಪ್ ಮಾಡಿ ರೆಡ್ ಹ್ಯಾಂಡ್ ಆಗಿ ಭ್ರಷ್ಟರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.