ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಶ್ರೀಧರಗದ್ದೆ ಗ್ರಾಮದಲ್ಲಿ 25 ಅಡಿ ಎತ್ತರದ ಶ್ರೀ ಗಿಡ್ಡ ಆಂಜನೇಯ ಸ್ವಾಮಿಯ ಪುತ್ಥಳಿ ಅನಾವರಣಗೊಂಡಿತು. ಇದು ತಾಲ್ಲೂಕಿನ ಎರಡನೇ ಅತಿ ದೊಡ್ಡ ಪ್ರತಿಮೆಯಾಗಿದೆ.
ಕಂಪ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಅವರು ಪಾಲ್ಗೊಂಡು 1 ಲಕ್ಷ ರೂ.ದೇಣಿಗೆ ನೀಡಿದರು.
ಕಾರ್ತಿಕ ಮಾಸದಲ್ಲಿ ಬರುವ ವ್ರತಗಳನ್ನು ಆಚರಿಸುವ ಮೂಲಕ ನಾವು ಪಾಪಗಳನ್ನು ತೊಡೆದುಹಾಕಬಹುದು ಎಂಬುದು ನಮ್ಮ ಸಂಪ್ರದಾಯವಾಗಿದೆ ಎಂದು ಅವರು ಹೇಳಿದರು.