ಬಳ್ಳಾರಿ: ‘ಶ್ರೀರಾಮುಲು ಅವರು ಸಿರಿಗುಪ್ಪದಿಂದ ಸ್ಪರ್ಧಿಸುವುದಿಲ್ಲ, ಬರೀ ಸುಳ್ಳು ಹೇಳುತಿದ್ದಾರೆ’ ಎಂದು ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಹೇಳಿದರು.
ಎಮ್ಮಿಗನೂರು ಗ್ರಾಮದ ಬಳಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಶ್ರೀರಾಮುಲು ಆಗಲಿ, ನಾನೇ ಆಗಲಿ ಅಥವಾ ಬಿಜೆಪಿಯಿಂದ ಯಾರೇ ಆಗಲಿ, ನಿರ್ದಿಷ್ಟ ಕ್ಷೇತ್ರದಿಂದ ಸ್ಪರ್ಧಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಶ್ರೀರಾಮುಲು ಸಿರುಗುಪ್ಪ ಅಥವಾ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಸುಳ್ಳು,’’ ಎಂದು ಒತ್ತಿ ಹೇಳಿದರು.
ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.