Bengaluru 17°C

ಚಾಮರಾಜನಗರ: ಆನೆ ಹಿಂಡು ಸಂಚಾರ… ಹೆಬ್ಬಾವು ರಕ್ಷಣೆ!

ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ ಕಾಡಿನಿಂದ ಗಜ ಪಡೆ ಕೃಷಿ ಭೂಮಿಯಲ್ಲಿ ತಿರುಗಾಟ ನಡೆಸಿದ ಘಟನೆ ಭಾನುವಾರ ನಡೆದಿದೆ.

ಚಾಮರಾಜನಗರ: ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ ಕಾಡಿನಿಂದ ಗಜ ಪಡೆ ಕೃಷಿ ಭೂಮಿಯಲ್ಲಿ ತಿರುಗಾಟ ನಡೆಸಿದ ಘಟನೆ ಭಾನುವಾರ ನಡೆದಿದೆ.


ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಅರಳವಾಡಿಯಲ್ಲಿ ಕಾಡಿನಿಂದ ಬಂದ ಸುಮಾರು 30 ಕ್ಕೂ ಹೆಚ್ಚು ಆನೆಗಳು ಕೃಷಿ ಜಮೀನಿನ‌ ಮೂಲಕ ಹಾದು ಹೋಗಿದೆ. ಆನೆ ಹಿಂಡು ಕಂಡ ಗ್ರಾಮಸ್ಥರು ಆತಂಕದಿಂದ ನೋಡುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಓಡಿಸಿದ್ದಾರೆ.


ಹು

ಇನ್ನೊಂದೆಡೆ ಕಬ್ಬಿನ ಗದ್ದೆಯಲ್ಲಿ ಅಡಗಿದ್ದ ಹೆಬ್ಬಾವನ್ನು ಉರುಗ ತಜ್ಞ ರಕ್ಷಿಸಿದ ಘಟನೆ ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರಿನಲ್ಲಿ ಭಾನುವಾರ ನಡೆದಿದೆ.


ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವಾಗ ಕಬ್ಬಿನ ನಡುವೆ ಅಡಗಿದ್ದ ಹೆಬ್ಬಾವು ಕಂಡ ರೈತರು ಆತಂಕ ವ್ಯಕ್ತಪಡಿಸಿದರು. ಕೂಡಲೇ ಉರುಗ ತಜ್ಞ ಅಶೋಕ್ ರವರಿಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದ ಅಶೋಕ್ ಕಬ್ಬಿನ ಗದ್ದೆಯಲ್ಲಿ ಅಡಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.


Nk Channel Final 21 09 2023