News Karnataka Kannada
Monday, April 29 2024
ತುಮಕೂರು

ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ ಸಲ್ಲದು: ಮಾಜಿ ಸಚಿವ ಬಿ.ಸಿ ನಾಗೇಶ್

Violence against Hindu activists is unacceptable: Former minister BC Nagesh
Photo Credit :

ತುಮಕೂರು: ತಿಪಟೂರು ಹಾಗೂ ರಾಜ್ಯದ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನೆಡೆದರೆ ಭಾರತೀಯ ಜನತಾ ಪಕ್ಷವು ಸಹಿಸುವುದಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ತಿಪಟೂರಿನ ಗೃಹ ಕಛೇರಿಯಲ್ಲಿ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೂತನವಾಗಿ ಶಾಸಕರಾಗಿರುವ ಕೆ.ಷಡಕ್ಷರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಅನೇಕ ಸುಳ್ಳು ಆರೋಪಗಳನ್ನು ಹಾಗೂ ಜಾತಿಯನ್ನು ಮುಂದೆಯಿಟ್ಟುಕೊಂಡು ತಾಲೂಕಿನಲ್ಲಿ ಲಿಂಗಾಯತ ಸಮಾಜಕ್ಕೆ ಒತ್ತಡವಿದ್ದರೂ ಸಹ ಅಭಿವೃದ್ಧಿ ಪರವಾಗಿ, ನನ್ನ ಪರವಾಗಿ ಮತಕೇಳಿದರೂ ನನಗೆ ೫೪ ಸಾವಿರ ಮತಗಳನ್ನು ನೀಡಿದ ಹಿಂದೂ ಸಮಾಜದ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಋಣವನ್ನು ಮುಂದಿನ ದಿನಗಳಲ್ಲಿ ತೀರಿಸುತ್ತೇನೆ ಎಂದರು.
ಹಿಂದೂ ಸಮಾಜದ ಎಲ್ಲರ ಮೇಲೂ ಸಹ ಇದೇ ರೀತಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುತ್ತಾರೆಂದು ಆಯಾ ಸಮಾಜದ ಮೇಲೆ ಒತ್ತಡ ಹಾಕಲಾಯಿತು. ಮುಸಲ್ಮಾನರ ಮತದಿಂದ ಗೆಲುವು ಸಾಧಿಸಲಾಗಿದೆ ಎಂದು ಅವರಿಂದ ದೌರ್ಜನ್ಯ ಮಾಡಲು ಬಿಟ್ಟರೆ ನಾನು ಸಹಿಸುವುದಿಲ್ಲ. ಚುನಾವಣೆಯು ಮುಗಿದು ಕೇವಲ ೨೪ ಗಂಟೆಯಲ್ಲಿ ಫಲಿತಾಂಶ ಬಂದ ನಂತರ ದೇವಸ್ಥಾನ ಹಾಗೂ ಮನೆಗಳ ಮುಂದೆ ಮುಸ್ಲಿಂ ಗುಂಡಾಗಳು ಪಟಾಕಿ ಹಚ್ಚಿ ಕೂಗಾಡಿದ್ದಾರೆ. ಗೋ ಹತ್ಯೆ ಮುಂದುವರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗೇನಾದರೂ ಮುಂದುವರೆದರೆ ಹೋರಾಟ ನಡೆಸಲಾಗುವುದು.

ಗಾಂಧಿನಗರದಲ್ಲಿ ವಾಟರ್ ಟ್ಯಾಂಕ್ ಮೇಲೆ ಹಸಿರು ಧ್ವಜ ಹಾಕಿದ್ದಾರೆ. ಕೂಡಲೇ ಆಡಳಿತ ವರ್ಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಭಟ್ಕಳದ ಸರ್ಕಲ್ ನಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದಾರೆ. ಬೆಳಗಾಂನಲ್ಲಿ ಪಾಕಿಸ್ತಾನದ ಪರವಾಗಿ ಘೋ?ಣೆ ಕೂಗಲಾಗಿದೆ ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ. ಶಿರಸಿಯಲ್ಲಿ ದೇವಸ್ಥಾನದ ಮುಂಭಾಗ ಪಟಾಕಿ ಹಚ್ಚಲಾಗಿದೆ.ಇಂತಹ ಪ್ರಕರಣಗಳಿಗೆ ಕೂಡಲೇ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಾವು ಕೊಬ್ಬರಿಗೆ ಹೆಚ್ಚಿನ ಬೆಂಬಲ ಬೆಲೆ ಕೊಡಿಸಬೇಕೆಂದು ಪ್ರಯತ್ನ ಮಾಡಿದ್ದೆವು. ಆದರೆ ಯಶಸ್ವಿಯಾಗಲಿಲ್ಲ. ಸಿದ್ದರಾಮಯ್ಯನವರು ಹಾಗೂ ತಾಲೂಕಿನ ಶಾಸಕರು ಸರ್ಕಾರ ಬಂದ ನಂತರ ಕ್ವಿಂಟಾಲ್ ಕೊಬ್ಬರಿಗೆ ೧೫,೦೦೦ ಕೊಡಿಸುತ್ತೇವೆಂದು ಹೇಳಿದ್ದರು. ಅದರಂತೆ ನೊಂದಿರುವ ರೈತರಿಗೆ ನೀವು ಆಡಿರುವ ಮಾತಿನಂತೆ ಕ್ಟಿಂಟಾಲ್ ಕೊಬ್ಬರಿಗೆ ರೂ. ೧೫೦೦೦ ಕೊಡಿಸಬೇಕೆಂದು ಹೇಳಿದರು. ತಾಲೂಕಿನ ಅಭಿವೃದ್ಧಿಗಾಗಿ ಶಾಸಕರು ಕೆಲಸ ಮಾಡುತ್ತಾರೆ, ಯಾವುದೇ ರೀತಿಯ ದ್ವೇ?ದ ರಾಜಕಾರಣ ಮಾಡುವುದಿಲ್ಲವೆಂಬ ವಿಶ್ವಾಸವಿದೆ. ಗ್ರಾಮೀಣ ಭಾಗದ,ನಗರದ ಅಭಿವೃದ್ಧಿ ಕೆಲಸಗಳು, ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳನ್ನು ಮುಂದುವರೆಸಲಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಎಪಿಎಮ್‌ಸಿ ಅಧ್ಯಕ್ಷ ದಿವಾಕರ್, ಮಾಜಿ ನಗರಸಭಾ ಸದಸ್ಯರಾದ ಪ್ರಸನ್ನ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷರಾದ ಸುರೇಶ್, ಎಸ್ಸಿ ಮೋರ್ಚ ಸಂಚಾಲಕ ಗಂಗರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಸಿಲೇಹಳ್ಳಿ ಜಗದೀಶ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು