ತುಮಕೂರು: ತಾಲೂಕಿನ ಕೊಟ್ಟಗೆರೆ ಹೋಬಳಿಯ ರಾಜ್ಯ ಹೆದ್ದಾರಿ 33ರ ಹಲಗೋನಹಳ್ಳಿ ಗ್ರಾಮದ ಬಳಿ ಅ.30ರ ಭಾನುವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದ ನಿವಾಸಿ ಪ್ರವೀಣ್ (20) ಎಂದು ಗುರುತಿಸಲಾಗಿದೆ.
ಮೃತ ಪ್ರವೀಣ್ ಕೊಟ್ಟಗೆರೆ ಹೋಬಳಿಯ ಹೊನ್ನನಹಳ್ಳಿ ಗ್ರಾಮದ ಮದುವೆ ಮಂಟಪದಲ್ಲಿ ಮದುವೆಗೆ ಹೋಗಿದ್ದು, ಹೊನ್ನನಹಳ್ಳಿಯಿಂದ ಸ್ವಲ್ಪ ದೂರದಲ್ಲಿರುವ ಹಲಗೋನಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಮೃತನ ತಂದೆ ಶಂಕಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.