ತುಮಕೂರು: ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಟೆಂಪಲ್ ರನ್ ಮಾಡಿದ ಪರಮೇಶ್ವರ್ ಅವರ ಸಿದ್ಧ ರಬೆಟ್ಟ, ಬೆಳ್ಳಾವಿ ಸೇರಿ ವಿವಿಧ ಮಠಗಳಿಗೂ ಭೇಟಿಕೊಟ್ಟು ಆಶೀರ್ವಾದ ಪಡೆದರು. ಉಮೇದುವಾರಿಕೆಗೂ ಮುನ್ನ ಬೃಹತ್ ರೋಡ್ ಶೋ ನಡೆಸಿದ ಪರಮೇಶ್ವರ ಅವರಿಗೆ ಸಾವಿರಾರು ಬೆಂಬಲಿಗರು ಕಾರ್ಯಕರ್ತರು ಸಾಥ್ ನೀಡಿದರು. ಪರಮೇಶ್ವರ್ ಪರ ಜೈಕಾರ ಕೂಗುತ್ತಾ ಗೆಲುವಿಗಾಗಿ ಕಾರ್ಯಕರ್ತರು ದೇವಾಲಯದಲ್ಲಿ ಈಡುಗಾಯಿ ಸಹ ಹೊಡೆದರು.