News Karnataka Kannada
Monday, April 29 2024
ತುಮಕೂರು

ಶ್ರೀರಾಮನ ಹೋಮ ಮಾಡಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸಚಿವ ಕೆಎನ್ ರಾಜಣ್ಣ

ಭಗವಾನ್ ಶ್ರೀರಾಮನನ್ನು ಅವಮಾನಿಸಿಯೂ ಸಚಿವ ಕೆಎನ್ ರಾಜಣ್ಣ ಮತ್ತು ಅವರ ಕುಟುಂಬ ಅಪ್ಪಟ ರಾಮಭಕ್ತರೆನಿಸಿಕೊಂಡಿದ್ದಾರೆ. 
Photo Credit : News Kannada

ತುಮಕೂರು: ಭಗವಾನ್ ಶ್ರೀರಾಮನನ್ನು ಅವಮಾನಿಸಿಯೂ ಸಚಿವ ಕೆಎನ್ ರಾಜಣ್ಣ ಮತ್ತು ಅವರ ಕುಟುಂಬ ಅಪ್ಪಟ ರಾಮಭಕ್ತರೆನಿಸಿಕೊಂಡಿದ್ದಾರೆ.

ಭಗವಾನ್ ಶ್ರೀರಾಮನನ್ನು  ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆಎನ್ ರಾಜಣ್ಣ ಮತ್ತು ಅವರ ಕುಟುಂಬ ಇಂದು ರಾಮಜಪದಲ್ಲಿ ತೊಡಗಿಸಿಕೊಂಡಿದ್ದು, ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಧುಗಿರಿ ತಾಲೂಕಿನ ಕಿತ್ತಾಗಳಿಯ ಶ್ರೀರಾಮ ದೇವಸ್ಥಾನದಲ್ಲಿ ಕೆಎನ್ ರಾಜಣ್ಣ ಕುಟುಂಬ ಹೋಮ-ಹವನದಲ್ಲಿ ಪಾಲ್ಗೊಂಡಿದ್ದಾರೆ.

ನವಗ್ರಹ, ಗಣಪತಿ ಹಾಗೂ ಶ್ರೀರಾಮ ಹೋಮ ಕೈಗೊಂಡಿದ್ದು, ಕೆಎನ್ ರಾಜಣ್ಣ, ಅವರ ಪತ್ನಿ ಶಾಂತಲ ಹಾಗೂ ಕುಟುಂಬದ ಸದಸ್ಯರು ಹೋಮದಲ್ಲಿ ಭಾಗಿಯಾಗಿದ್ದಾರೆ.

ನೂರಾರು ಕೋಟಿ ವೆಚ್ಚ ಮಾಡಿ ದೇವಸ್ಥಾನ ಕಟ್ಟೋ ಬದಲು ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಬೇಕೆಂಬ ವಾದಕ್ಕೆ ಪ್ರತಿಕ್ರಿಯಿಯಿಸಿದ ಅವರು, ದೇವಸ್ಥಾನವನ್ನು ಕಟ್ಟೋದು ತಪ್ಪಲ್ಲ. ದೇವಸ್ಥಾನದ ಅವಶ್ಯಕತೆ ಇದೆ. ಅಲ್ಲದೇ ನನ್ನ ಹೇಳಿಕೆಯ ಡ್ಯಾಮೆಜ್ ಕಂಟ್ರೋಲ್ ಗೆ ಇಂದು ರಾಮನ ಪೂಜೆ ಮಾಡಿಲ್ಲ. ನಾನೂ ಅಪ್ಪಟ ರಾಮಭಕ್ತ ಎಂದು ಸ್ಪಷ್ಟನೆ ನೀಡಿದರು.

ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಕೆಲವರು ಹೇಳಬಹುದು. ಆದರೆ ನಾನು ಶ್ರೀರಾಮನಲ್ಲಿ ದೈವತ್ವವನ್ನೂ, ಪೂಜಾರ್ಹ ವ್ಯಕ್ತಿ ಎಂದು ನಂಬಿದ್ದೇನೆ. ಹಾಗಾಗಿ ಪೂಜೆ ಮಾಡುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು