Categories: ತುಮಕೂರು

ಮಹಿಳಾ ಕುಸ್ತಿಪಟುಗಳು ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ತುಮಕೂರು: ಅಂತಾರಾಷ್ಟ್ರೀಯ ಕುಸ್ತಿಪಟು ಆಯ್ಕೆ ಮಾಡುವ ಆಮಿಷ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳುವ ನೀಚ ಕೆಲಸ ಮಾಡಿದ ಸಂಸದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ ಸಿಂಗ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ತಲುಪಿದ ಸಮಿತಿಯ ಸದಸ್ಯರು ಕಚೇರಿ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಹದಿನೇಳು ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಮಾಡಿರುವ ಸಂಸದನ ಪರ ನಿಂತಿರುವ ಕೇಂದ್ರ ಸರ್ಕಾರದ ನಡವಳಿಕೆ ಖಂಡನೀಯ. ಈ ಬಗ್ಗೆ ಪ್ರಶ್ನಿಸಿದ ಕ್ರೀಡಾಪಟುಗಳ ಮೇಲೆ ಪೊಲೀಸರಿಂದ ದೌರ್ಜನ್ಯ ಕೂಡಾ ಮಾಡಲಾಗಿದೆ. ಫಡರೇಶನ್ ಅಧ್ಯಕ್ಷನನ್ನು ಉಳಿಸಿಕೊಳ್ಳಲು ಮುಂದಾದ ಮೋದಿ ಅವರ ನೇತೃತ್ವದ ಸರ್ಕಾರ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಮಹಿಳಾ ಕ್ರೀಡಾಪಟುಗಳು ರಸ್ತೆಗಿಳಿದು ನ್ಯಾಯಕ್ಕೆ ಹೋರಾಟ ಮಾಡುವ ದುಸ್ಥಿತಿ ತಂದಿದ್ದಲ್ಲದೆ, ವಿಶ್ವದಲ್ಲಿ ಕ್ರೀಡೆಯಲ್ಲಿ ದೇಶದ ಮರ್ಯಾದೆ ಕಾಪಾಡುವ ನಮ್ಮ ಹೆಮ್ಮೆಯ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಂತರ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಜಿ.ಎಚ್.ಜಗನ್ನಾಥ್, ತಾಲ್ಲೂಕು ಸಂಚಾಲಕ ಎನ್.ಎ.ನಾಗರಾಜು, ವಿಭಾಗೀಯ ಸಂಚಾಲಕರಾದ ಈಶ್ವರಯ್ಯ, ಅರಿವೆಸಂದ್ರ ಕೃಷ್ಣಪ್ಪ, ಪಪಂ ಸದಸ್ಯ ರೇಣುಕಾಪ್ರಸಾದ್, ಮುಖಂಡರಾದ ಕೊಡಿಯಾಲ ಮಹದೇವು, ನಾಗರಾಜು, ನಾಗಭೂಷಣ, ದಲಿತ್ ಗಂಗಣ್ಣ, ಕರೇತಿಮ್ಮಯ್ಯ ಇತರರು ಇದ್ದರು.

Sneha Gowda

Recent Posts

ಅಕ್ಕನ ಮನೆಗೆ ಕನ್ನ ಹಾಕಿದ ತಂಗಿ: 182 ಗ್ರಾಂ ಚಿನ್ನಾಭರಣ, 52 ಲಕ್ಷ ನಗದು ಕಳ್ಳತನ

ಸಾಲ ಮಾಡಿಕೊಂಡಿದ್ದ ತಂಗಿ ಹಣಕ್ಕಾಗಿ ಸ್ವಂತ ಅಕ್ಕನ ಮನೆಯಿಂದಲೇ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ…

12 mins ago

ಪ್ರಜ್ವಲ್ ವಿಡಿಯೋ ಕೇಸ್: “ಎಸ್​ಐಟಿ ಎಂದರೆ ಸಿದ್ದು, ಶಿವಕುಮಾರ್ ಟೀಂ”

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ. ಅವರಿಗೆ ಕೇವಲ ಪ್ರಚಾರ,…

13 mins ago

ಮಗಳ ಜೊತೆ ಬಂದು ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಆಲಗೂರ್

ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ‌ ಪ್ರೊ. ರಾಜು ಆಲಗೂರ ಅವರು ಇಂದು ಬೆಳಗ್ಗೆ ತಮ್ಮ ಸ್ವಗ್ರಾಮ ತೊರವಿಯಲ್ಲಿ ಮಗಳು ಭವಾನಿಯೊಂದಿಗೆ ಆಗಮಿಸಿ…

34 mins ago

ಬಂಟವಾಳದ ಬಂಟರ ಭವನದ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

50 mins ago

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು ಎಲ್ಲಿ ಮತದಾನ ಮಾಡ್ತಾರೆ ಗೊತ್ತಾ?

ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್‌ ರಿಷಬ್ ಶೆಟ್ಟಿ ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೇ-7 ರ ಇಂದು ಲೋಕಸಭಾ ಚುನಾವಣೆಯ ಎರಡನೇ…

54 mins ago

ಬಿಟ್ ಕಾಯಿನ್ ಹಗರಣ ಕೇಸ್‌ : ಆರೋಪಿ ಶ್ರೀಕಿ ಬಂಧನ

ಬಿಟ್ ಕಾಯಿನ್ ಹಗರಣ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. 2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ…

1 hour ago