ತುಮಕೂರು: ಪಾವಗಡದ ಸೋಲಾರ್ ಪಾರ್ಕ್ ಗಾಗಿ ಜಮೀನು ನೀಡಿರುವ ರೈತರಿಗೆ ವಾರ್ಷಿಕವಾಗಿ ಪ್ರತಿ ಎಕರೆಗೆ ನೀಡಲಾಗುತ್ತಿರುವ ಗುತ್ತಿಗೆ ಹಣ 21 ಸಾವಿರ ರೂ.ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಭರವಸೆ ನೀಡಿದರು.
ಇಂದು ಪಾವಗಡದಲ್ಲಿ ಸೋಲಾರ್ ಪಾರ್ಕ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಸಚಿವರು ರೈತರಿಗೆ ಈ ಭರವಸೆ ನೀಡಿದರು.
ಇದಲ್ಲದೆ ಸೋಲಾರ್ ಪಾರ್ಕ್ ಗೆ ಭೂಮಿ ನೀಡಿರುವ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ನೀಡಲಾಗುವುದು ಎಂದರು.
ಇಲ್ಲಿನ 12500 ಎಕರೆ ಪ್ರದೇಶದಲ್ಲಿನ ಸೋಲಾರ್ ಪಾರ್ಕ್ ನಿಂದ 2050 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದರು. ಇಲ್ಲಿನ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದ ಸಚಿವರು, ಪ್ರಸ್ತುತ 1200 ರಿಂದ 1500 ಮಂದಿ ಇಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದರು. ಪಾವಗಡ ಶಾಸಕ ವೆಂಕಟರಮಣಪ್ಪ ಹಾಜರಿದ್ದರು.