ತುಮಕೂರು: ಪೂರ್ವ ಆಫ್ರಿಕಾದ ಮಲಾವಿ ಕೇಂದ್ರೀಯ ಕ್ರಿಶ್ಚಿಯನ್ ವಿಶ್ವವಿದ್ಯಾಲಯವು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚಿದಂಬರ ಆಶ್ರಮದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳ ಪ್ರಬಂಧಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಚಿದಂಬರ ಆಶ್ರಮದ ಹಳೆಯ ವಿದ್ಯಾರ್ಥಿ ಜಿ.ಎಸ್.ಅನಂತಕೃಷ್ಣ ಅವರು ಸಲ್ಲಿಸಿದ ಸಂಸ್ಕೃತ ಸಾಹಿತ್ಯ ಕ್ಷೇತ್ರಕ್ಕೆ ವೇದವ್ಯಾಸ ಮಹರ್ಷಿಗಳ ಕೊಡುಗೆ ಎಂಬ ಸಂಶೋಧನಾ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ದೊರೆತಿದೆ.
ಚಿದಂಬರ ಆಶ್ರಮದ ಸಂಸ್ಕೃತ ಪಾಠಶಾಲೆ ಯ ಮುಖ್ಯೋಪಾಧ್ಯಾಯ ರಾದ ಅನಂತ ಭಟ್ ಅವರು ಸಂಸ್ಕೃತ ಸಾಹಿತ್ಯದಲ್ಲಿ ಗರುಡ ಪುರಾಣದ ಪ್ರಾಮುಖ್ಯತೆ ಎಂಬ ವಿಷಯದ ಸಂಶೋಧನಾ ಪ್ರಭಂದಕ್ಕೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.